- ಹೊಸ ಸಮಾಚಾರ

ನಮ್ಮಜ್ಜಿ
ಉಂಬೆಯ ಜಾಯಿಯ ಚೆಂಬಿಲಿ ಕರದ್ದರಅಳಗೆಲಿ ಕಾಸುಗು ನಮ್ಮಜ್ಜಿಮಂದದ ಜಾಯಿಯ ಕಂಚಿನ ಗ್ಲಾಸಿಲ್ಲಿಕುಡಿ ಮಗ° ಹೇಳಿಯೆ ಕೊಡುಗಜ್ಜಿ. ಕೆಮಿಗದ ನೇಲುವ ಓಲೆಯ ಹಾಕುಗುಕೆಂಪಿನ ಸೀರೆಯ ನಮ್ಮಜ್ಜಿ.ಹಪ್ಪಳ ಸೆಂಡಗೆ ಚೆಂದಕೆ ಮಾಡುಗುಕೆಂಡಲ್ಲಿ ಸುಟ್ಟಾಕಿ ಕೊಡುಗಜ್ಜಿ ಸೇಲೆಯ ಮಾಡಿರೆ ಚೊಕ್ಕಕೆ ಬೈಗವುಫೇಶನು ಒಪ್ಪವು ನಮ್ಮಜ್ಜಿಹೂಗಿನ ಮಾಲೆಯ ಚೆಂದಕೆ ಕಟ್ಟುಗುಬೆಂದಿಗೆ ಕೊರದುದೆ ಕೊಡುಗಜ್ಜಿ. ಎಂತದೊ ಕೂದರೆ ನೆಂಪಾತಜ್ಜಿಯಪದ್ಯದ ಸಾಲಿಲಿ ನಮ್ಮಜ್ಜಿಸತ್ತರು ಇಕ್ಕವು ಎಲ್ಲರ ಮನೆಲಿದೆಆಶೀರ್ವಾದವ ಕೊಡುಗಜ್ಜಿ.

ಪುಟ್ಟನ ಬಿಂಗುರ್ಟಿ-20
ಮಹಾಭಾರತ ಬರದ್ದದು ಆರು? ಬೇಸಗೆ ರಜೆ ಮುಗುದು ಅಂದಟ್ಟೆ ಪುಟ್ಟನ ಶಾಲೆಯು ಸುರುವಾದ್ದು ಸುರುವಾಣ ದಿನವೆ ಮೂರನೆ ಪಿರಿಡಿಂಗೆ ಕನ್ನಡ ಮಾಸ್ಟೃ ಬಂದವು ಬಂದವೇ ಬೋರ್ಡಿಲ್ಲಿ ದೊಡ್ಡಕೆ ’ಮಹಾಭಾರತ’ ಹೇದು ಬರದುಮಡಿಗಿಕ್ಕಿ ಮಕ್ಕಳತ್ತರೆ ಕೇಟವು – ಮಹಾಭಾರತ ಬರದ್ದದು ಆರು? ಪುಟ್ಟಂಗೆ ಮಂಡೆಬೆಶಿ ಆತು. ಹತ್ತರೆ ಕೂದ ದಿನೇಸನ ತಟ್ಟಿ ಪುಟ್ಟ ಹೇದ° – ಬೇಡದೋ°, ನಾಳಂಗೆ ನಾವು ಪೈವಳಿಕೆ ಶಾಲಗೆ ಸೇರುವೊ° ದಿನೇಸಂಗೆ ಕೈಯ್ಯೂ ಅಂದಾಜಿ ಆಯಿದಿಲ್ಲೆ ತಲೆಯೂ ಅಂದಾಜಿ ಆಯಿದಿಲ್ಲೆ. ಏಕನಾ? – ಕೇಟತ್ತು ದಿನೇಸ° ಪುಟ್ಟ° – ಮತ್ತೆ ಎಂತದ್ಧನ ಇದು. ಮಾಸ್ಟ್ರು ಅವ್ರೇ ಬರದು ಮಡಿಗಿಕ್ಕಿ ಮಹಾಭಾರತ ಬರದ್ದದು ಆರು ಹೇದು ನಮ್ಮ ಕೇಳ್ತವು! ದಿನೇಸ ತಲೆತಿರುಗಿ ಬೀಳದ್ದೊಂದೇ ಬಾಕಿ ! ಹೊತ್ತೋಪಗ ಆಯೇಕ್ಕಾರೆ ಚೆಕ್ಕೆ ಮಾವಂಗೆ ಶುದ್ದಿ ಗೊಂತಾಯಿದಿಲ್ಲೇದು ಪುಟ್ಟನ ಲೆಕ್ಕ!!

ನೆನಪಿನ ದೋಣಿಯಲಿ
ನಂಗಳ ವಯಸ್ಸಿನವು ಅಂದ್ರೆ ಕನ್ನಡ ಶಾಲೆಗೆ ಹೋದವು ರಾಶಿ ಪುಣ್ಯ ಮಾಡಿದ್ದ ಹೇಳಿ ನಾ ತಿಳ್ಕಂಡಿದ್ದೆ. ಎಂತಕ್ಕೆ ಅಂದ್ರೆ, ಆಗ ನಂಗ ಮಾಡ್ದಷ್ಟ್ ಮಜಾ ಈಗಿನ ಮಕ್ಕೊಕ್ ಸಿಗ್ತಾ ಇಲ್ಲೆ. ಆಗ ಬರೀ ಓದುದೊಂದೆ ಮಾಡ್ತಿಪ್ವಿಲ್ಲೆ, ಅಪ್ಪ, ಆಯಿನು ಓದ್ಕ್ಯಾ ಹೇಳಿ ರಾಶಿ ಹೇಳ್ತಿಪ್ವು ಇಲ್ಲೆ. ಬೆಳಿಗ್ಗೆ ಹಂಡೆಲ್ ಇದ್ದ ಬಿಷಿನಿರ್ ಮೈಮೇಲೆ ಹೊಯಿಕಂಡು, ತೆಳ್ಳವ್ ದೋಸೆಗ್ ಬೆಲ್ಲ ತುಪ್ಪ ಹಚ್ಚಕ್ಯಾಂಡು ತಿಂದ್ಕಂಡು ಪಾಟೀಚಿಲಾ ಹೆಗಲಿಂಗೆ ಹೈಕಂಡು, ಕೇರಿ ಮಕ್ಕಳ ಸೊಂತಿಗೆ ಶಾಲೆಗೆ ನೆಡ್ಕಂಡು ಹೋದ್ರೆ ಆಯಿತ್ತು. ದಾರೀಲಿ ಹೋಗಾಕರೆ ಎಲ್ಲೆಲ್ಲಿ ಸಂಪಿಗೆ ಹಣ್ಣು, ನೇರಳೆ ಹಣ್ಣು, ಸಳ್ಳೆ ಹಣ್ಣು ಆಯ್ದು ಹೇಳಿ ನೋಡ್ಕ್ಯತ್ತ ಹೋಪುದು, ಮನೆಗ್ ವಾಪಸ್ ಬರಕರೇ ಕೊಯಲ್ ಆವ್ತು ಹೇಳಿ! ಶಾಲೆಗೆ ಹೊದ್ದೆಯ 9 ವರೆಗೆ ಪ್ರಾರ್ಥನೆ ಮಾಡುದು. ಕಡೆಗೆ ತರಗತಿ ಶುರು. ಒಂದರಿಂದ ಐದನೇ ತರ್ಗತಿವರೆಗೆ ಇದ್ದ ಶಾಲೆ ಅದು. ನಂಗೊಕೆ ಯಾವುದೇ ಕ್ಲಾಸ್ನ ಭೇದ ಇದ್ದಿತ್ಲೇ. ಎಲ್ಲಾ ಕ್ಲಾಸ್ನವೂ ಒಂದೇ ಹೇಳುವಂತ ಭಾವನೆ. ಹಂಗಾಯಿ ಶಾಲೆಲಿ ಕಮ್ಮಿ ಮಕ್ಕಳಿದ್ದರುವ ಯಾರು ಇಲ್ಲೇ ಹೇಳು ಕೊರತೆ ಕಾಣ್ತಿಪ್ಪಿಲ್ಲೆ. ನಂಗೆ ನಾಲ್ಕನೇ ಕ್ಲಾಸ್ ಮುಗಿಸಿ 5ನೇ ಕ್ಲಾಸಿಗೆ ಹೋದ್ದು ಒಂದು ತರ ಖುಷಿ ಕಂಡಿತ್ತು. 5ನೇ ಕ್ಲಾಸಿಗ್ ಹೋದಾಗ ನಾನು ದೊಡ್ಡವಳು ಹೇಳ ಫೀಲ್ ಬಂತು. ಕಡಿಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನoಗೆ ಆವಾಗ್ಲೆಯ. ನಾಡಗೀತೆ, ರಾಷ್ಟ್ರಗೀತೆ, ಕ್ಲೇ ಮಾಡಲಿಂಗ್ ಚಿತ್ರಕಲೆ, ಕಥೆ ಹೇಳುವ ಸ್ಪರ್ಧೆ ಹೀಗೆ ಎಲ್ಲದಕ್ಕೂ ಹೆಸರುಕೊಟ್ಟದ್ದೆಯ. ಚೊಲೊ ಓದಿ ನಂಬರ್ ತಗಳ ಹೇಳು ಆಸೆ ಶುರ್ವಾಗಿದ್ದೂ 5ನೇ ಕ್ಲಾಸಿಂದನೆಯ. ನಲಿ ಕಲಿ ಮಕ್ಕಕ್ಕೆ ದೊಡ್ಡವರಾದ ನಂಗ ಜ ವ ಮ ಬ ನ,ರ ಗ ಸ ದ ಅ ಇಂತದ್ದೆಲ್ಲ ಹೇಳಿಕೊಡ್ತಿದ್ಯ. ನಂಗೊಕೆ ಅದೇ ಒಂದ್ ದೊಡ್ ಖುಷಿ ವಿಷಯ ಆಯಿತ್ತು. ಆಗಿನ ಮಾಸ್ತರಕ್ಕೊಗೆ ಮಕ್ಕಕೆ ಹೊಡೀಲಾಗ ಹೇಳು ರೂಲ್ಸ್ ಇದ್ದಿತ್ಲೆ, ಅಪ್ಪಂದಿಕ್ಕನೆ ಬಂದು “ಬರ ಸರಿ ಕಲಿಯದ್ರೆ ಎರಡು ಬಿಡಿ” ಹೇಳಿಕ್ಕೆ ಹೊವತಿಪ್ಪ. ಹಂಗಾಯಿ ಮಾಸ್ತರು ಅಕ್ಕೊರಿಗೆ ಮತ್ತೂ ಧೈರ್ಯ. ಒಂಟಿ

ನಮ್ಮ ಭಾಷೆಲಿ ಏಕವಚನ ನಪುಂಸಕ
ಮನ್ನೆ ಇರ್ಳು ಎನ್ನ ಪುಳ್ಳಿಯ ಫೋನ್. “ಪುಳ್ಳಿ” ನಮ್ಮ ಹವ್ಯಕ ಭಾಷೆಲಿ ನಪುಂಸಕ ಲಿಂಗ, ಮಕ್ಕಳ ಮಕ್ಕೋ. ಮಾಣಿಯೂ ಅಕ್ಕು, ಕೂಸೂ ಅಕ್ಕು. ಅಣ್ಣ ತಮ್ಮಂದಿರ ಅಥವಾ ಅಕ್ಕ ತಂಗೆಕ್ಕಳ ಪುಳ್ಯಕ್ಕಳುದೇ ಪುಳ್ಯಕ್ಕಳೇ. ಇಂಗ್ಲೀಷ್ ಭಾಷೆಲಿ ಕೂಡ ಹಾಂಗೇ-ಗ್ರಾಂಡ್ ಸನ್, ಗ್ರಾಂಡ್ ಡಾಟರ್. ಆದರೆ ಸಂಸ್ಕೃತಲ್ಲಿ ಮಾತ್ರ ಹಾಂಗಲ್ಲ. ಮಗನ ಮಗ ಪೌತ್ರ, ಮಗನ ಮಗಳು ಪೌತ್ರಿ, ಮಗಳ ಮಗ ದೌಹಿತ್ರ, ಮಗಳ ಮಗಳು ದೌಹಿತ್ರಿ, ಹಿಂಗೆ ಸ್ಪಷ್ಟವಾಗಿ ಹೇಳಿದ್ದವು. ಇನ್ನೊಂದು ಸರ್ತಿ ನಿಂಗೊ ಎಲ್ಲಿಯಾದರೂ ನಮ್ಮೊರ ಮದುವೆಗೆ ಹೋದರೆ, ಧಾರೆ ಅಪ್ಪಗ ಎರಡು ಕಡೆಯ ಭಟ್ಟ ಮಾವಂದಿರು ಉಸಿರು ಬಿಗಿಹಿಡಿದು ಮಂತ್ರ ಹೇಳುದರ ಕೇಳಿ. ಆನು ಹೇಳುದು ನಿಂಗೊಗೆ ಗೊಂತಕ್ಕು. ಕೂಸಿನ ಗೋತ್ರ ಕಡಿದು ಧಾರೆ ಎರೆದು ಕೊಡುವಾಗ ಅಜ್ಜ, ಮುತ್ತಜ್ಜನೂ ಬತ್ತವು ಹೇಳಿ. ಈ ದೌಹಿತ್ರಿ ಶಬ್ದವ ಮದಲು ಓದಿದ್ದು ಒಂದು ಹಳೆ ರೆಕಾರ್ಡಿಲಿ. ಅದು ಕ್ರಿಸ್ತಶಕ 1870ನೇ ಇಸವಿದು. ಕಾಗದಂಗೊ ಕೈಲಿ ಹಿಡಿದರೆ ಹೊಡಿ ಹೊಡಿ ಅಕ್ಕು. ಮೆಲ್ಲಂಗೆ ಬಿಡಿಸಿ ಓದಿದೆ “ಬಾಳೆ ಕೋಡಿ ಶಂಕರನಾರಾಯಣ ಭಟ್ಟರ ಮಗಳಾದ ಐಂತ್ತಮ್ಮ ಎಂಬ ನಾನು, ದೌಹಿತ್ರಿ ಹಕ್ಕಿನಿಂದ ಅನುಭವಿಸಿ ಬರುವ ಈ ಸರ್ವಾದಿ ಆಸ್ತಿಯನ್ನು……..”. ಗೆಂಡು ಮಕ್ಕೋ ಇಲ್ಲದ್ದರೆ ಮಗಳಕ್ಕೊಗೆ ಆಸ್ತಿ. ಇದಕ್ಕೆ ಹೆಸರು ದೌಹಿತ್ರಿ ಅಕ್ಕು. ಮಕ್ಕಳೂ ಇಲ್ಲದ್ದೆ ಗೆಂಡ ಸತ್ತರೆ? ಹೆಂಡತಿಗೆ ಆ ಕಾಲಲ್ಲಿ ಅಶನಾರ್ಥ ಮಾತ್ರ. ಆಸ್ತಿ ಗೆಂಡನ ಅಣ್ಣ ತಮ್ಮಂದಿರಿಂಗೆ ಸೇರುದು. ಫೋನು ಮಾಡಿದ್ದು ಎನ್ನ ಪೌತ್ರಿ, ಐದನೇ ಕ್ಲಾಸು. ಅದು ಹಾಂಗೆ ಒಂದೊಂದು ಸರ್ತಿ ಫೋನ್ ಮಾಡ್ಲೆ ಇದ್ದು, ಉದಾಸೀನ ಅಪ್ಪಗ. ಅಜ್ಜಂಗಾದರೆ ಯಾವಾಗಲೂ ಫೋನು ಮಾಡ್ಲೆ ಅಕ್ಕು, ಹೇಂಗೂ ಕೆಲಸ ಇಲ್ಲದ್ದೆ ಮೊಬೈಲ್ ಕುಟ್ಟಿಕೊಂಡು ಇಪ್ಪದಲ್ಲದಾ ಹೇಳಿ. ಆನು ಫೋನು ನೆಗ್ಗಿದ ಕೂಡ್ಲೇ ಅದು ಎನ್ನ ಕೇಳುದು ” ಕಿಂ ಕರೋತಿ”?, ಎನಗೂ ರಜ್ಜ ಸಂಸ್ಕೃತ ಮಾತಾಡ್ಲೆ ಅರಡಿತ್ತು ಹೇಳಿ. ಅದು ರಜೆಲಿ ವ್ಯಾಮದೊರು (ವ್ಯೋಮ ಲಿಂಗ್ವಿಷ್ಟಿಕ್ ಲೇಬ್ಸ್ ಫೌಂಡೇಶನ್) ಮಕ್ಕೊಗೆ ರಜೆಯಲ್ಲಿ ನಡೆಸುವ ಆನ್ಲೈನ್ ಸಂಭಾಷಣಾ ಕ್ಲಾಸಿಂಗೆ ಸೇರಿದ್ದು. ಆನು ತಿರ್ಗಿ
- ಮುಖ್ಯ ವಿಷಯ
2026ನೇ ಸಾಲಿನ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಆಹ್ವಾನ
ಇಪ್ಪದೊಂದೇ ಭೂಮಿ; ಒಳುಶುದು ನಮ್ಮ ಕೈಲೇ ಇದ್ದು
ಚಂದ್ರನಲ್ಲಿಗೆ 10 ದಿನದ ಪ್ರವಾಸ; ಖಗೋಳ ವಿಜ್ಞಾನಿಗಳ ಸಾಹಸ
ಯಕ್ಷಗಾನದ ‘ದಶಾವತಾರಿ’ ಸೂರಿಕುಮೇರು ಕೆ. ಗೋವಿಂದಭಟ್
ಹವ್ಯಕ ಭಾಷಾ ಅಕಾಡಮಿ: ಆಯೆಕ್ಕಾದು ಎಂತರ?
ಸಮಷ್ಟಿಲಿ ನಡದರೆ ಹವಿಗನ್ನಡ ಭಾಷೆ ಬೆಳೆಗು
ಹೊಸ ಬರಹ-ಲೇಖನ

ನಮ್ಮಜ್ಜಿ
ಉಂಬೆಯ ಜಾಯಿಯ ಚೆಂಬಿಲಿ ಕರದ್ದರಅಳಗೆಲಿ ಕಾಸುಗು ನಮ್ಮಜ್ಜಿಮಂದದ ಜಾಯಿಯ ಕಂಚಿನ ಗ್ಲಾಸಿಲ್ಲಿಕುಡಿ ಮಗ° ಹೇಳಿಯೆ ಕೊಡುಗಜ್ಜಿ. ಕೆಮಿಗದ ನೇಲುವ ಓಲೆಯ ಹಾಕುಗುಕೆಂಪಿನ ಸೀರೆಯ ನಮ್ಮಜ್ಜಿ.ಹಪ್ಪಳ ಸೆಂಡಗೆ ಚೆಂದಕೆ ಮಾಡುಗುಕೆಂಡಲ್ಲಿ ಸುಟ್ಟಾಕಿ ಕೊಡುಗಜ್ಜಿ ಸೇಲೆಯ ಮಾಡಿರೆ ಚೊಕ್ಕಕೆ ಬೈಗವುಫೇಶನು ಒಪ್ಪವು ನಮ್ಮಜ್ಜಿಹೂಗಿನ ಮಾಲೆಯ ಚೆಂದಕೆ ಕಟ್ಟುಗುಬೆಂದಿಗೆ ಕೊರದುದೆ ಕೊಡುಗಜ್ಜಿ. ಎಂತದೊ ಕೂದರೆ ನೆಂಪಾತಜ್ಜಿಯಪದ್ಯದ ಸಾಲಿಲಿ ನಮ್ಮಜ್ಜಿಸತ್ತರು ಇಕ್ಕವು ಎಲ್ಲರ ಮನೆಲಿದೆಆಶೀರ್ವಾದವ ಕೊಡುಗಜ್ಜಿ.

ಪುಟ್ಟನ ಬಿಂಗುರ್ಟಿ-20
ಮಹಾಭಾರತ ಬರದ್ದದು ಆರು? ಬೇಸಗೆ ರಜೆ ಮುಗುದು ಅಂದಟ್ಟೆ ಪುಟ್ಟನ ಶಾಲೆಯು ಸುರುವಾದ್ದು ಸುರುವಾಣ ದಿನವೆ ಮೂರನೆ ಪಿರಿಡಿಂಗೆ ಕನ್ನಡ ಮಾಸ್ಟೃ ಬಂದವು ಬಂದವೇ ಬೋರ್ಡಿಲ್ಲಿ ದೊಡ್ಡಕೆ ’ಮಹಾಭಾರತ’ ಹೇದು ಬರದುಮಡಿಗಿಕ್ಕಿ ಮಕ್ಕಳತ್ತರೆ ಕೇಟವು – ಮಹಾಭಾರತ ಬರದ್ದದು ಆರು? ಪುಟ್ಟಂಗೆ ಮಂಡೆಬೆಶಿ ಆತು. ಹತ್ತರೆ ಕೂದ ದಿನೇಸನ ತಟ್ಟಿ ಪುಟ್ಟ ಹೇದ° – ಬೇಡದೋ°, ನಾಳಂಗೆ ನಾವು ಪೈವಳಿಕೆ ಶಾಲಗೆ ಸೇರುವೊ° ದಿನೇಸಂಗೆ ಕೈಯ್ಯೂ ಅಂದಾಜಿ ಆಯಿದಿಲ್ಲೆ ತಲೆಯೂ ಅಂದಾಜಿ ಆಯಿದಿಲ್ಲೆ. ಏಕನಾ? – ಕೇಟತ್ತು ದಿನೇಸ° ಪುಟ್ಟ° – ಮತ್ತೆ ಎಂತದ್ಧನ ಇದು. ಮಾಸ್ಟ್ರು ಅವ್ರೇ ಬರದು ಮಡಿಗಿಕ್ಕಿ ಮಹಾಭಾರತ ಬರದ್ದದು ಆರು ಹೇದು ನಮ್ಮ ಕೇಳ್ತವು! ದಿನೇಸ ತಲೆತಿರುಗಿ ಬೀಳದ್ದೊಂದೇ ಬಾಕಿ ! ಹೊತ್ತೋಪಗ ಆಯೇಕ್ಕಾರೆ ಚೆಕ್ಕೆ ಮಾವಂಗೆ ಶುದ್ದಿ ಗೊಂತಾಯಿದಿಲ್ಲೇದು ಪುಟ್ಟನ ಲೆಕ್ಕ!!

ನೆನಪಿನ ದೋಣಿಯಲಿ
ನಂಗಳ ವಯಸ್ಸಿನವು ಅಂದ್ರೆ ಕನ್ನಡ ಶಾಲೆಗೆ ಹೋದವು ರಾಶಿ ಪುಣ್ಯ ಮಾಡಿದ್ದ ಹೇಳಿ ನಾ ತಿಳ್ಕಂಡಿದ್ದೆ. ಎಂತಕ್ಕೆ ಅಂದ್ರೆ, ಆಗ ನಂಗ ಮಾಡ್ದಷ್ಟ್ ಮಜಾ ಈಗಿನ ಮಕ್ಕೊಕ್ ಸಿಗ್ತಾ ಇಲ್ಲೆ. ಆಗ ಬರೀ ಓದುದೊಂದೆ ಮಾಡ್ತಿಪ್ವಿಲ್ಲೆ, ಅಪ್ಪ, ಆಯಿನು ಓದ್ಕ್ಯಾ ಹೇಳಿ ರಾಶಿ ಹೇಳ್ತಿಪ್ವು ಇಲ್ಲೆ. ಬೆಳಿಗ್ಗೆ ಹಂಡೆಲ್ ಇದ್ದ ಬಿಷಿನಿರ್ ಮೈಮೇಲೆ ಹೊಯಿಕಂಡು, ತೆಳ್ಳವ್ ದೋಸೆಗ್ ಬೆಲ್ಲ ತುಪ್ಪ ಹಚ್ಚಕ್ಯಾಂಡು ತಿಂದ್ಕಂಡು ಪಾಟೀಚಿಲಾ ಹೆಗಲಿಂಗೆ ಹೈಕಂಡು, ಕೇರಿ ಮಕ್ಕಳ ಸೊಂತಿಗೆ ಶಾಲೆಗೆ ನೆಡ್ಕಂಡು ಹೋದ್ರೆ ಆಯಿತ್ತು. ದಾರೀಲಿ ಹೋಗಾಕರೆ ಎಲ್ಲೆಲ್ಲಿ ಸಂಪಿಗೆ ಹಣ್ಣು, ನೇರಳೆ ಹಣ್ಣು, ಸಳ್ಳೆ ಹಣ್ಣು ಆಯ್ದು ಹೇಳಿ ನೋಡ್ಕ್ಯತ್ತ ಹೋಪುದು, ಮನೆಗ್ ವಾಪಸ್ ಬರಕರೇ ಕೊಯಲ್ ಆವ್ತು ಹೇಳಿ! ಶಾಲೆಗೆ ಹೊದ್ದೆಯ 9 ವರೆಗೆ ಪ್ರಾರ್ಥನೆ ಮಾಡುದು. ಕಡೆಗೆ ತರಗತಿ ಶುರು. ಒಂದರಿಂದ ಐದನೇ ತರ್ಗತಿವರೆಗೆ ಇದ್ದ ಶಾಲೆ ಅದು. ನಂಗೊಕೆ ಯಾವುದೇ ಕ್ಲಾಸ್ನ ಭೇದ ಇದ್ದಿತ್ಲೇ. ಎಲ್ಲಾ ಕ್ಲಾಸ್ನವೂ ಒಂದೇ ಹೇಳುವಂತ ಭಾವನೆ. ಹಂಗಾಯಿ ಶಾಲೆಲಿ ಕಮ್ಮಿ ಮಕ್ಕಳಿದ್ದರುವ ಯಾರು ಇಲ್ಲೇ ಹೇಳು ಕೊರತೆ ಕಾಣ್ತಿಪ್ಪಿಲ್ಲೆ. ನಂಗೆ ನಾಲ್ಕನೇ ಕ್ಲಾಸ್ ಮುಗಿಸಿ 5ನೇ ಕ್ಲಾಸಿಗೆ ಹೋದ್ದು ಒಂದು ತರ ಖುಷಿ ಕಂಡಿತ್ತು. 5ನೇ ಕ್ಲಾಸಿಗ್ ಹೋದಾಗ ನಾನು ದೊಡ್ಡವಳು ಹೇಳ ಫೀಲ್ ಬಂತು. ಕಡಿಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನoಗೆ ಆವಾಗ್ಲೆಯ. ನಾಡಗೀತೆ, ರಾಷ್ಟ್ರಗೀತೆ, ಕ್ಲೇ ಮಾಡಲಿಂಗ್ ಚಿತ್ರಕಲೆ, ಕಥೆ ಹೇಳುವ ಸ್ಪರ್ಧೆ ಹೀಗೆ ಎಲ್ಲದಕ್ಕೂ ಹೆಸರುಕೊಟ್ಟದ್ದೆಯ. ಚೊಲೊ ಓದಿ ನಂಬರ್ ತಗಳ ಹೇಳು ಆಸೆ ಶುರ್ವಾಗಿದ್ದೂ 5ನೇ ಕ್ಲಾಸಿಂದನೆಯ. ನಲಿ ಕಲಿ ಮಕ್ಕಕ್ಕೆ ದೊಡ್ಡವರಾದ ನಂಗ ಜ ವ ಮ ಬ ನ,ರ ಗ ಸ ದ ಅ ಇಂತದ್ದೆಲ್ಲ ಹೇಳಿಕೊಡ್ತಿದ್ಯ. ನಂಗೊಕೆ ಅದೇ ಒಂದ್ ದೊಡ್ ಖುಷಿ ವಿಷಯ ಆಯಿತ್ತು. ಆಗಿನ ಮಾಸ್ತರಕ್ಕೊಗೆ ಮಕ್ಕಕೆ ಹೊಡೀಲಾಗ ಹೇಳು ರೂಲ್ಸ್ ಇದ್ದಿತ್ಲೆ, ಅಪ್ಪಂದಿಕ್ಕನೆ ಬಂದು “ಬರ ಸರಿ ಕಲಿಯದ್ರೆ ಎರಡು ಬಿಡಿ” ಹೇಳಿಕ್ಕೆ ಹೊವತಿಪ್ಪ. ಹಂಗಾಯಿ ಮಾಸ್ತರು ಅಕ್ಕೊರಿಗೆ ಮತ್ತೂ ಧೈರ್ಯ. ಒಂಟಿ ಕಾಲಲ್ಲಿ ಬಗ್ಗಿ ನಿಲ್ಸುದು ಇಂತ ಶಿಕ್ಷೆ ಇರ್ತಿಪ್ಪು ನಂಗೊಕೆ. ಸರ್ ಎಷ್ಟೇ ಹೊಡಿಲಿ ಎಂತದೆ ಮಾಡ್ಲಿ ಅವ್ರ ಮೇಲಿನ ಗೌರವ ಮಾತ್ರ ಹನಿನೂ ಕಮ್ಮಿ ಅವತಿಪ್ಪಿಲ್ಲೆ. ಅವೂ ಅಷ್ಟೆಯಾ ಮನೆ ಮಕ್ಳ ತಿದ್ದಿದ್ಹಾಂಗೆ ಎಲ್ಲಾ ಮಕ್ಳನ್ನೂ ತಿದ್ತಿಪ್ಪ. ಮದ್ಯಾಹ್ನ ಅವ್ತಿದ್ದಂಗೆ ಅಡ್ಗೆ ಅತ್ತೆ ಮಾಡಿಟ್ಟ ಬಿಸಿ ಊಟ ಉಂಡ್ಕಂಡು, ಕ್ಲಾಸಿಗೆ ಹಾಜರಪ್ಪುದು. ಅಡಿಗೆ ಅತ್ತೆ ಮಾಡು ಅಡ್ಗೆ ರಾಶಿ ರುಚಿ ಅವತಿಪ್ಪು, ಅಡ್ಗೆ ಅತ್ತೆನು ನಂಗಳ ಊರಿಂದೆ ಆಯಿತ್ತು. ಅದು ನಾಲ್ಕ್ ದಿನ ರಜೆ ಹಾಕಿದ್ರೆ ಮಾವಂದ್ ಅಡ್ಗೆ ಪಾಳಿ. ಆಗ ಒಂದಷ್ಟು ಮಕ್ಕ ಮನೆಯಿಂದನೇ ಊಟ ತನ್ಕoಬುದೆ ಆಯಿತ್ತು. ಊಟ ಆಗಿದ್ದೆಯಾ ಕ್ಲಾಸಿಗ್ ಹಾಜರಪ್ಪುದು. 4 ಗಂಟೆ ಎಷ್ಟೊತ್ತಿoಗೆ ಆವ್ತು ಹೇಳಿ ಕಾಯುದು, ಆಟಕ್ಕೆ ಓಡುದು. ಆಗನ್ ಆಟಗಳು ಯಾವ್ ಯಾವ್ದು ಅಂದ್ರೆ ಮೀನ್ ಬಲೆ, ಕಣ್ಣ ಮುಚ್ಚಾಲೆ, ಕಲ್ಲಾಟ, ಕುಂಟಾಟ ಇಂತದ್ದು. ಹಿಂಗೆ ಎಲ್ಲ ಒಟ್ಟಿಗೆ ಸೆರ್ಕಂಡು ಆಟ ಆಡ್ತಿದ್ದ ಕಾಲನೇ ಚಲೋ ಕಾಣ್ತಾ ಇದ್ದು ಈಗಾ. ಮತ್ತೆ ಆ ದಿನ ಬರ ಹೇಳಂದ್ರೆ ಮುಂದನ್ ಜನ್ಮದಲ್ಲೆಯ. ಶಾಲೆ ಮುಗದ್ದೆಯ ಬೆಳಿಗ್ಗೆ ನೋಡ್ಕೊಂಡು ಬಂದ ಸಳ್ಳೆ ಹಣ್ಣು, ನೇರಳ ಹಣ್ಣು ಕೊಯಕಂಡು ಮನೆಗ್ ಹೋಪುದು.. ಮತ್ತೊಂದು ಗಮ್ಮತ್ತು ಎಂತ ಆಯಿತ್ತು ಅಂದ್ರೆ, ನಂಗಕ್ ಕಲ್ಸು ಮಾಸ್ತರು, ಸಂಗೀತ್ ಟೀಚರ್ ಆಯಿದ್ರು. ದಾರಿಲಿ ಹೋಗಕಾರೆ ಅವರತ್ರ ಒಂದ್ ಹಾಡು ಹೇಳ್ಸು ನಂಗ್ಳ ಪದ್ಧತಿನೇ ಆಗೋಯಿತ್ತು. “ನಿ ನಿಲ್ಲದೆ ನನಗೇನಿದೆ” ಅವ್ರ್ ಹೇಳು ಈ ಹಾಡು ನನ್ನ ಫೇವರೆಟ್ ಹಾಡು. ಇದೆಲ್ಲ ನನ್ನ ಬಾಲ್ಯದ ಅದ್ಭುತ ಕ್ಷಣಗಳು. ಇವತ್ತಿನ ಮಕ್ಕೊಕೆ ಇಂಥ ಮಜದ ಕ್ಷಣ ಎಲ್ಲಾ ಕಮ್ಮಿ ಆವ್ತಿದ್ದು. ಶಾಲೆಗೆ ಓಡುದು, ಹೋಂವರ್ಕ್ ಮಾಡುದು, ಟ್ಯೂಶನ್ನು, ಬೇರೆ ಬೇರೆ ಕ್ಲಾಸು.. ಇಂಥದ್ದೇ ಆಗೋಗ್ತಿದ್ದು ಅಲ್ದಾ…

ನಮ್ಮ ಭಾಷೆಲಿ ಏಕವಚನ ನಪುಂಸಕ
ಮನ್ನೆ ಇರ್ಳು ಎನ್ನ ಪುಳ್ಳಿಯ ಫೋನ್. “ಪುಳ್ಳಿ” ನಮ್ಮ ಹವ್ಯಕ ಭಾಷೆಲಿ ನಪುಂಸಕ ಲಿಂಗ, ಮಕ್ಕಳ ಮಕ್ಕೋ. ಮಾಣಿಯೂ ಅಕ್ಕು, ಕೂಸೂ ಅಕ್ಕು. ಅಣ್ಣ ತಮ್ಮಂದಿರ ಅಥವಾ ಅಕ್ಕ ತಂಗೆಕ್ಕಳ ಪುಳ್ಯಕ್ಕಳುದೇ ಪುಳ್ಯಕ್ಕಳೇ. ಇಂಗ್ಲೀಷ್ ಭಾಷೆಲಿ ಕೂಡ ಹಾಂಗೇ-ಗ್ರಾಂಡ್ ಸನ್, ಗ್ರಾಂಡ್ ಡಾಟರ್. ಆದರೆ ಸಂಸ್ಕೃತಲ್ಲಿ ಮಾತ್ರ ಹಾಂಗಲ್ಲ. ಮಗನ ಮಗ ಪೌತ್ರ, ಮಗನ ಮಗಳು ಪೌತ್ರಿ, ಮಗಳ ಮಗ ದೌಹಿತ್ರ, ಮಗಳ ಮಗಳು ದೌಹಿತ್ರಿ, ಹಿಂಗೆ ಸ್ಪಷ್ಟವಾಗಿ ಹೇಳಿದ್ದವು. ಇನ್ನೊಂದು ಸರ್ತಿ ನಿಂಗೊ ಎಲ್ಲಿಯಾದರೂ ನಮ್ಮೊರ ಮದುವೆಗೆ ಹೋದರೆ, ಧಾರೆ ಅಪ್ಪಗ ಎರಡು ಕಡೆಯ ಭಟ್ಟ ಮಾವಂದಿರು ಉಸಿರು ಬಿಗಿಹಿಡಿದು ಮಂತ್ರ ಹೇಳುದರ ಕೇಳಿ. ಆನು ಹೇಳುದು ನಿಂಗೊಗೆ ಗೊಂತಕ್ಕು. ಕೂಸಿನ ಗೋತ್ರ ಕಡಿದು ಧಾರೆ ಎರೆದು ಕೊಡುವಾಗ ಅಜ್ಜ, ಮುತ್ತಜ್ಜನೂ ಬತ್ತವು ಹೇಳಿ. ಈ ದೌಹಿತ್ರಿ ಶಬ್ದವ ಮದಲು ಓದಿದ್ದು ಒಂದು ಹಳೆ ರೆಕಾರ್ಡಿಲಿ. ಅದು ಕ್ರಿಸ್ತಶಕ 1870ನೇ ಇಸವಿದು. ಕಾಗದಂಗೊ ಕೈಲಿ ಹಿಡಿದರೆ ಹೊಡಿ ಹೊಡಿ ಅಕ್ಕು. ಮೆಲ್ಲಂಗೆ ಬಿಡಿಸಿ ಓದಿದೆ “ಬಾಳೆ ಕೋಡಿ ಶಂಕರನಾರಾಯಣ ಭಟ್ಟರ ಮಗಳಾದ ಐಂತ್ತಮ್ಮ ಎಂಬ ನಾನು, ದೌಹಿತ್ರಿ ಹಕ್ಕಿನಿಂದ ಅನುಭವಿಸಿ ಬರುವ ಈ ಸರ್ವಾದಿ ಆಸ್ತಿಯನ್ನು……..”. ಗೆಂಡು ಮಕ್ಕೋ ಇಲ್ಲದ್ದರೆ ಮಗಳಕ್ಕೊಗೆ ಆಸ್ತಿ. ಇದಕ್ಕೆ ಹೆಸರು ದೌಹಿತ್ರಿ ಅಕ್ಕು. ಮಕ್ಕಳೂ ಇಲ್ಲದ್ದೆ ಗೆಂಡ ಸತ್ತರೆ? ಹೆಂಡತಿಗೆ ಆ ಕಾಲಲ್ಲಿ ಅಶನಾರ್ಥ ಮಾತ್ರ. ಆಸ್ತಿ ಗೆಂಡನ ಅಣ್ಣ ತಮ್ಮಂದಿರಿಂಗೆ ಸೇರುದು. ಫೋನು ಮಾಡಿದ್ದು ಎನ್ನ ಪೌತ್ರಿ, ಐದನೇ ಕ್ಲಾಸು. ಅದು ಹಾಂಗೆ ಒಂದೊಂದು ಸರ್ತಿ ಫೋನ್ ಮಾಡ್ಲೆ ಇದ್ದು, ಉದಾಸೀನ ಅಪ್ಪಗ. ಅಜ್ಜಂಗಾದರೆ ಯಾವಾಗಲೂ ಫೋನು ಮಾಡ್ಲೆ ಅಕ್ಕು, ಹೇಂಗೂ ಕೆಲಸ ಇಲ್ಲದ್ದೆ ಮೊಬೈಲ್ ಕುಟ್ಟಿಕೊಂಡು ಇಪ್ಪದಲ್ಲದಾ ಹೇಳಿ. ಆನು ಫೋನು ನೆಗ್ಗಿದ ಕೂಡ್ಲೇ ಅದು ಎನ್ನ ಕೇಳುದು ” ಕಿಂ ಕರೋತಿ”?, ಎನಗೂ ರಜ್ಜ ಸಂಸ್ಕೃತ ಮಾತಾಡ್ಲೆ ಅರಡಿತ್ತು ಹೇಳಿ. ಅದು ರಜೆಲಿ ವ್ಯಾಮದೊರು (ವ್ಯೋಮ ಲಿಂಗ್ವಿಷ್ಟಿಕ್ ಲೇಬ್ಸ್ ಫೌಂಡೇಶನ್) ಮಕ್ಕೊಗೆ ರಜೆಯಲ್ಲಿ ನಡೆಸುವ ಆನ್ಲೈನ್ ಸಂಭಾಷಣಾ ಕ್ಲಾಸಿಂಗೆ ಸೇರಿದ್ದು. ಆನು ತಿರ್ಗಿ ತಿರ್ಗಿ ಪುಳ್ಳಿಯ ‘ಅದು’ ಹೇಳಿ ಹೇಳುತ್ತಾ ಇದ್ದೆ. ಇಲ್ಲಿ ಪುಳ್ಳಿ ನಪುಂಸಕ ಲಿಂಗ ಆದ ಕಾರಣ ‘ಅದು’ ಹೇಳುದು ವ್ಯಾಕರಣದಲ್ಲಿ ಸರಿ ಆದಿಪ್ಪಲೂ ಸಾಕು. ಆದರೆ ಇಲ್ಲಿ ಪುಳ್ಳಿ ಕೂಸು ಸ್ತ್ರೀಲಿಂಗ. ನಮ್ಮ ಭಾಷೆಲಿ ಸ್ತ್ರೀಲಿಂಗ ಇದ್ದಾ? ನಾವು ನಮ್ಮ ಭಾಷೆಲಿ ಹೇಳುವ ಕೆಲವು ವಾಕ್ಯಂಗಳ ನೋಡುವ– ಅಜ್ಜಿ ಹೋತು, ಅಬ್ಬೆ ಬಂತು (ಬಂದ), ಅಕ್ಕ ಬರೆತ್ತು — ಹೀಂಗೆ ಕೆಲವು. ‘ನಾಯಿ ಕೂಡಾ ತೋಟಕ್ಕೆ ಹೋತು’ ಹೇಳಿಯೇ ನಾವು ಹೇಳುದು. ಇನ್ನು ನಮ್ಮ ಜಾತಿ ಅಲ್ಲದ್ದರೆ ಅವುದೇ ‘ಅದು ಬಂದ, ಅದು ಹೋತು. ಅದಕ್ಕೇ ಕೆದಂಬಾಡಿ ಜತ್ತಪ್ಪ ರೈ ಬರೆದ್ದವು “ಹವ್ಯಕರು ಸ್ತ್ರೀಯರ ಮತ್ತು ಶೂದ್ರರ ಸಂಬೋಧಿಸುದು ನಪುಂಸಕ ಲಿಂಗಲ್ಲಿ” ಹೇಳಿ ಅವರ ‘ಈಡೊಂದು ಹುಲಿ ಎರಡು’ ಪುಸ್ತಕಲ್ಲಿ. ಅವು ಕನ್ನಡದಲ್ಲಿ ಬರೆದ ‘ಬೇಟೆಯ ನೆನಪುಗಳು’ ಇಂಗ್ಲೀಷಿಲಿ ಶಿಕಾರಿಯ ಬಗ್ಗೆ ಬರೆದ ಜಿಮ್ ಕಾರ್ಬೆಟ್, ಕೆನ್ನೆತ್ ಏಂಡರಸನರ ಪುಸ್ತಕಗಳಷ್ಟೇ ಲಾಯಕಡ, ಹಾಂಗೆ ಹೇಳುತ್ತವು ಓದಿದೊರು. ಲಿಂಗದ ವಿಷಯ ಬಿಡುವ, ವಚನಕ್ಕೆ ಬಪ್ಪಾ. ಹೆಚ್ಚಾಗಿ ವಿಟ್ಲ, ಕೋಳ್ಯೂರು ಪುತ್ತೂರು ಸೀಮೆಯೊರಲ್ಲಿ ಏಕವಚನವೇ ಜಾಸ್ತಿ. ಆನು ಅಪ್ಪನ, ಅಪ್ಪಚ್ಚಿಯ, ಅಜ್ಜನ, ಹೆಚ್ಚಾಗಿ ಎಲ್ಲ ಹಿರಿಯರ ಹೇಳಿಕೊಂಡು ಇದ್ದದೇ ‘ನೀನು’ ಹೇಳಿ. ಇದಲ್ಲಿ ಏನಾದರೂ ವಿಶೇಷ ಇದ್ದು ಹೇಳಿ ಎನಗೆ ಅಂದಾಜೇ ಇತ್ತಿಲೆ, ಎನ್ನ ಸೋದರ ಭಾವ ಕುಂಬ್ಲೆ ಸೀಮೆಂದ ಮದುವೆ ಅಪ್ಪ ವರೆಗೆ. ಮದುವೆ ಆದ್ದೇ ಆದ್ದು. ಅಷ್ಟರವರೆಗೆ ಸೋದರ ಮಾವನ (ಎನ್ನ ಅಪ್ಪನ) ನೀನು ಹೇಳಿಕೊಂಡಿದ್ದ ಭಾವ ಒಂದೇ ಸರ್ತಿಗೆ ‘ನಿಂಗೋ’ ಹೇಳಿ ಹೇಳ್ಲೇ ಶುರು ಮಾಡಿದ. ಇದು ಎಂತಪ್ಪಾ? ಈ ಭಾವಂಗೆ ಎಂತಾತು? ಹೇಳಿ ಆಲೋಚನೆ ಮಾಡಿದೆ, ಅಂಬಗ. ಮತ್ತೆ ಕುಂಬ್ಳೆ ಸೀಮೆಲಿ ಹಾಂಗೇ ಕ್ರಮ ಹೇಳಿ ಗೊಂತಾತು, ತಂಗೆಕ್ಕಳ ಕೊಟ್ಟಪ್ಪಗ, ಎನಗೂ ಎನ್ನ ತಮ್ಮಂಗೂ ಮದುವೆ ಆದ್ರೂ ಅಲ್ಲಿಂದಲೇ. ಅಷ್ಟರವರೆಗೆ ಗೆಂಡುಮಕ್ಕೋ ಹೆಣ್ಣು ಕೊಟ್ಟ ಮಾವನ, ಅತ್ತೆಯ ಮಾತ್ರ ‘ನಿಂಗೊ’ ಹೇಳಿ ಹೇಳುದರ ಕೇಳಿದೊನು ಆನು. ಹೆಮ್ಮಕ್ಕೊ ಮಾತ್ರ ಗೆಂಡನ ಅಪ್ಪನ, ಅಬ್ಬೆಯ, ಅಣ್ಣಂದಿರ ‘ನಿಂಗೋ’ ಹೇಳಿಯೇ ಹೇಳುದು. ಮೈದುನರ ಮಾತ್ರ ಏಕವಚನಲ್ಲಿಯೇ ಹೆಸರು ಹೇಳಿಯೇ ದಿನುಗೇಳುದು. ಇದು ನಮ್ಮ ಭಾಷೆಲಿ ಮಾತ್ರವಾ? ಹೇಳಿ ಕೇಳಿದರೆ, ಅಲ್ಲ; ಕೊಂಕಣಿಗಳಲ್ಲಿಯೂ ಹಾಂಗೇ ಅಡ, ಏಕವಚನವೇ ಜಾಸ್ತಿ. ಆದರೂ ಬೇರೆ ಜಾತಿಯೊರೂ ಇಪ್ಪಗ ಅವಕ್ಕೆ ಕೇಳುವ ಹಾಂಗೆ ನಾವು ನಪುಂಸಕ ಲಿಂಗಲ್ಲಿ ಹೇಳುದು ಸರಿ ಆವುತ್ತಾ? ಎಂಗಳ ಕನ್ಯಾನ ಭಾರತ ಸೇವಾಶ್ರಮದ ಸ್ಥಾಪಕ ಧೀರೇಂದ್ರ ಭಟ್ಟಾಚಾರ್ಯರ ಅಳಿಯ ಶಂಕರಣ್ಣ ಮಾತ್ರ ‘ಅಂವ ಹೇಳಿದ’ ಹೇಳಿಯೇ ಹೇಳುದು. ನಪುಂಸಕ ಲಿಂಗದ ಉಪಯೋಗ ಶಂಕರಣ್ಣ ಮಾಡಿದ್ದವೇ ಇಲ್ಲೆ.

ನೀ ಎನಗಿದ್ದರೆ ಆ ನಿನಗೆ…!
ಈ ಪಟ ತೆಗೆದವ್ವು ಶ್ಯಾಮ ಪ್ರಸಾದ್ ಎಸ್. ಮಂಗ್ಳೂರಿನ ವಳಚ್ಚಿಲ್ಲಿಲಿ ಇಪ್ಪ ಎಕ್ಸ್ಪರ್ಟ್ ಕಾಲೇಜಿಲಿ ಗಣಿತ ವಿಷಯವ ಪಾಠ ಮಾಡುತ್ತವು. ಪಟ ತೆಗೆವದು, ಕಾದಂಬರಿ ಓದೊದು ಇವರ ಹವ್ಯಾಸ. ಪಟವ ಅವು “ಹವ್ಯಕ ವಿಶ್ವ”ಕ್ಕೆ ಕಳುಸಿದ್ದವು. ಪಟಕ್ಕೊಂದು ಚೆಂದದ ವಿವರಣೆಯನ್ನೂ ಕೊಟ್ಟಿದವು. ಅದು ಇಲ್ಲೇ ಕೆಳ ಇದ್ದು… ಈ ಪಟ ತೆಗವಗ, ಆನು ಗ್ರೇಶಿದ್ದು, ಆ ಎರುಗ ಚಿಟ್ಟೆಯ ತಿಂಬಲೆ ಬಂದದು ಹೇಳಿ. ಆದರೆ ಅದಲ್ಲ. ಇಲ್ಲಿ ಇಬ್ರಿಂಗುದೆ ಒಬ್ಬರಿಂದ ಒಬ್ಬಂಗೆ ಪ್ರಯೋಜನ ಇದ್ದು. ಈ ಎರುಗ ಒಂದು ರೀತಿಲಿ ಚಿಟ್ಟೆಗೆ ಸಹಾಯ ಮಾಡ್ತು. ಬಹುಷಃ ಚಿಟ್ಟೆ ಕೋಶದ ಒಳ ಇಪ್ಪಗ, ಅದರ ಕಾಪಡುದೇ ಈ ಎರುಗ. ಚಿಟ್ಟೆ ಹೆರ ಹಾಕುವ ಒಂದು ದ್ರವ, ಎರಗಕ್ಕೆ ಆಹಾರ. ಚಿಟ್ಟೆಗೆ ಸಸಿಯ ಎಸರು ಆಹಾರ. ಈ ಜಗತ್ತಿಲಿ ಎಷ್ಟೊಂದು ಹೊಂದಾಣಿಕೆ ಇದ್ದಲ್ಲದಾ? *** ಈ ಪಟಕ್ಕೆ ಪೂರಕವಾಗಿ ನಮ್ಮ ಕವಿ ಸಚಿನ್ ಮುಂಗಿಲ ಇವು ಒಂದು ಪದ್ಯವನ್ನೂ ಬರದ್ದವು. ಇದಾ ಇಲ್ಲಿದ್ದು… ಕೆಂಪಿರುವೆಯೊಟ್ಟಿಂಗೆ ಚಿಟ್ಟೆಯೊಡನಾಟಕ್ಕೆನೆಂಪಿರಲಿ, ನಿನಗಾನು ಮತ್ತೆನಗೆ ನೀನು ।ಸೊಂಪು ಹೂಗೆಸರೆಲ್ಲ ಕುಡಿದಾನು ನಿನಕೊಡುವೆತಂಪಿನೊಳ ನಾವಿಪ್ಪ – ಸವ್ಯಸಾಚಿ ॥

ಮಾಲಕ್ಕ ಮಾಡಿದ ಬಪ್ಪಂಗಾಯಿ ಸ್ಪೆಷಲ್ ತಾಳು!
ಮಾಲಕ್ಕ ಒಂದು ಹೊಸ ರುಚಿಗೆ ತಯಾರು ಮಾಡಿಗೊಂಡಿತ್ತು. ಗುಡುಗುಡುನೆ ಅತ್ಲಾಗಿತ್ಲಾಗಿ ಓಡಿಗೊಂಡು..”ಇದಾ ಒಂದು ಗೆನಾದ್ದು ಹದಾಕೆ ಬೆಳದ ಬಪ್ಪಂಗಾಯಿ ಕೊಯಿರಿ ನೋಡ°.. ಲಾಯಕ ತಾಳು ಮಾಡೆಕೂಳಿ ಇದ್ದೆ..” ಹೇದು ಕಿಟ್ಟಣ್ಣನತ್ತರೆ ಹೇಳಿತ್ತು. ಇದರ ಕೇಳಿ ಬೈಪ್ಪಣೆಲಿ ಹಾಳೆ ಸಿಗುಕ್ಕೊಂಡಿತ್ತಿದ್ದ ಕಿಟ್ಟಣ್ಣ ಅದರ ಅರ್ಧಕ್ಕೆ ಬಿಟ್ಟಿಕ್ಕಿ.. ಮಾಲಕ್ಕ ಹೇಳಿದಾಂಗಿದ್ದ ಬಪ್ಪಂಗಾಯಿಯ ಹುಡುಕ್ಕಿ ತೋಟಿಲಿ ಕುಟ್ಟಿ ಕೆಳಹಾಕಿದ°.ಓಡಿ ಬಂದು ಮಾಲಕ್ಕ.. “ಬಪ್ಪಂಗಾಯಿ ಸ್ಪೆಷಲ್ ತಾಳು ಮಾಡುತ್ತೆ.. ನಿಂಗೊಗೆ ಇಂದು..” ಹೇದೊಂಡು ಮೆಟ್ಟುಕತ್ತಿಲಿ ಕಚಕಚನೆ ಬಪ್ಪಂಗಾಯಿ ಸೈಸುಮಾಡಿ ತುಂಡುತುಂಡು ಮಾಡಿಕ್ಕಿ ಸೀದಾ ಒಲೆ ಮೇಲೆ ಮಡುಗಿದ ಅಗಳಿಲಿ ಹಾಕಿ ರಜ್ಜ ಉಪ್ಪು, ಮೆಣಸು, ಬೆಲ್ಲ, ಹುಳಿ ಸೇರುಸಿ ಒಂದು ಗ್ಲಾಸು ನೀರು ಹಾಕಿ ಬೇವಲೆ ಮಡುಗಿ ಪ್ಲೇಟು ಮುಚ್ಚಿತ್ತು. ಇದರ ನೋಡಿಯೊಂಡೇ ಬಾಕಿ ಆಗಿತ್ತ ಕಿಟ್ಟಣ್ಣನ.. “ಇಲ್ಲ್ಯೆಂತರ ಗೆಬ್ಬಾಯಿಸುದು.. ಬೇಗ.. ಮೀವದು.. ಹೋಗಿ ಬೇಗ..” ಹೇದು ಮಾಲಕ್ಕ ಅಟ್ಟಿಕ್ಕಿ.. ಒಗ್ಗರಣೆ ಕಾಯಿ ಹಾಕಿ ತಾಳು ಇಳುಗಿ ಮಡುಗಿತ್ತು. ಕಿಟ್ಟಣ್ಣಂಗೆ ಮೀತ್ತಲ್ಲಿಗೇ ಪರಿಮಳ ಮೂಗಿಂಗೆ ಬಡುದತ್ತು. ರಪಕ್ಕ ಮಿಂದು ಜೆಪ ಮಾಡಿ ತೋರ್ತು ಕಟ್ಟಿಗೊಂಡು ಊಟಕ್ಕೆ ಆಶೆಲಿ ಬಂದ ಕಿಟ್ಟಣ್ಣ. ಬಾಳೆಲೆಲಿ ತಾಳು ಬಡುಸಿ ರೆಡಿ ಇತ್ತು. ಕೊಶೀಲಿ ಉಂಬಲೆ ಕೂದ ಕಿಟ್ಟಣ್ಣ. ಅಶನದ ಮೇಲೆ ತುಪ್ಪ ಬಡುಸಿಕ್ಕಿ ಬೇಕಾದ್ದರ ಎಲ್ಲ ಹತ್ತರೆ ಮಡಿಕ್ಕೊಂಡು ಮಾಲಕ್ಕನೂ ಒಟ್ಟಿಂಗೆ ಊಟಕ್ಕೆ ಕೂದತ್ತು.ಕೈಞೀರು ತೆಗದು ಒಂದು ತುತ್ತು ಅಶನ ತಾಳು ಕೂಡಿ ಕಿಟ್ಟಣ್ಣ ಬಾಯಿಗೆ ಹಾಕಿ ಜಗುದ್ದದಷ್ಟೇ…”ಯಬ.. ಎಂತಾ ತೊರುಸುತ್ತಿದು.. ನಾಲಗೆ ಹೊಗೆತ್ತು..!! ಇದುವೇಯಾ ನಿನ್ನ ಸ್ಪೆಷಲ್ ತಾಳು…!?” ಹೇದೊಂಡು ಒಂದು ಚೆಂಬು ನೀರು ಉರ್ಪಿದ ಕಿಟ್ಟಣ್ಣ. ನಿಧಾನಕ್ಕೆ ಮಾಲಕ್ಕನೂ ಒಂದು ಭಾಗ ತಾಳು ತಿಂದಿಕ್ಕಿ.. “ರಜ್ಜ..ತೊರಿಕ್ಕೆ ಆದಾಂಗಪ್ಪದಪ್ಪಪ್ಪೋ..!! ಈ ನಿಂಗಳ ಗಡಿಬಿಡಿಗೆ ಹೀಂಗೇ ಅಪ್ಪದಿದ..!! ಉಮ್ಮಪ್ಪ .. ಎನಗೊಂತಲ್ಲೆ..ಲಾಯಿಕಕೇ ಮಾಡಿದ್ದೆ ಆನು.. ನಿಂಗೊಗೆ ಬೇಡದ್ರೆ ಬೇಡ..ಉಣ್ಣೆಡಿ..! ಆನು ಗಟ್ಟಿ ಮೊಸರು ಎನಗೆ ತಕ್ಕ ಮಡುಗಿದ್ದೆ .. ಈ ಸೆಖೆಗೆ ಬೇರೆಂತದೂ ಬೇಡ.. ಗಟ್ಟಿ ಮೊಸರು ಉಪ್ಪಿನಕಾಯಿ ಸೇರುಸಿ ಉಂಡರೆ ತಂಪಾವುತ್ತು..” ಹೇದಿಕ್ಕಿ ಮಾಲಕ್ಕ ಬಾಟರ್ಕಾಯಿ ಹಾಕಿ ಸುರುದು ಸುರುದು ಉಂಡತ್ತದ. “ಎಂತಾ ಬಪ್ಪಂಗಾಯಿ ಕೊರದಿಕ್ಕಿ ಭಾಗಕ್ಕೆ ನೀರು ತೋರುಸಿಯೇ ಇರೆ ನೀನು..! ಮೇಣದ ಸಮೇತ ಹಾಂಗೇ ಬೇಶಿಪ್ಪೆ..!!..ಅದೇ ತಾಳು ಹೀಂಗಪ್ಪಲೆ ಕಾರಣ..” ಹೇದೊಂಡು ಕಿಟ್ಟಣ್ಣ ಏವತ್ರಾಣಾಂಗೆ ನೀರು ಮಜ್ಜಿಗೆಯೇ ಗತಿ ಹೇದು ಸಮಾಧಾನ ಮಾಡಿಯೊಂಡು ಅದರಲ್ಲಿ ಉಂಡ°. 🤪🤭😂 **” (ಚಿತ್ರ: ಸಾಂದರ್ಭಿಕ ಎಐ ಚಿತ್ರ)

ನೆಲ ಕಡ್ಲೆ ಕಥೆ
ಕೆಲಸ ಹೇoಗೆ ಆಯೆಕ್ಕು ಗೊಂತಿದ್ದಾ? ಕಡ್ಲೆ ತಿಂದು ಕೈ ತೊಳದ ಹಾಂಗೇ! ಆನುದೇ ಎಂತ ಇಲ್ಲಿ ಕಡ್ಲೆ ಹೊರುಕ್ಕೊಂಡು ಕೂಯಿದಿಲ್ಲೇ ಅವ ಅಷ್ಟು ಖಾರ್ಬಾರು ಮಾಡುವಾಗ ಆನೆಂತ ಕಡ್ಲೆ ತಿಂದೊಂಡು ಕೂರೆಕಿತ್ತಾ? “ಯೋ… ಈ ಅರುಣಕ್ಕನ ಕಥೆ ಎಂತರಪ್ಪಾ?” ಇದು ಹೇಳಿ ಕಣ್ಣು ಹೊರಳುಸೆಡಿ. ಶುದ್ದಿ ಹೇಳದ್ದೇ ಸುಮಾ………..ರು ದಿನಾತದ. ಹಾಂಗೇ ಸಣ್ಣ ಶುದ್ದಿ ಹೇಳಿಕಿತೆ… ಆತಾ.. ಅದುವೇ ನೆ.ಕ.ಕ. ಅಂದು ಮನೆ, ಮನೇಲಿ ಬಡತನ ಇಪ್ಪಗ ಈ ನೆಲಕಡ್ಲೆಯೂ, ಒಂದು ತುಂಡು ಬೆಲ್ಲವೂ ಇದ್ದರೆ ಹಬ್ಬಡ. ದೂರ ದಾರಿ ನಡವಗ ಹಶು, ಬಚ್ಚೇಲು ಅಪ್ಪಲೇ ಬಿಡಡಾ ಈ ನೆಲ ಕಡ್ಲೆ. ಶಾಲಗೆ ಹೋಪಗಳು ಎಲ್ಲಾ ಅಂಗಡಿಗಳಲ್ಲಿ ಕುಪ್ಪಿ ಭರಣಿಲಿ ಈ ನೆಲ ಕಡ್ಲೆ ಇಕ್ಕು. ಶನಿವಾರ ದಿನ ಮಧ್ಯಾಹ್ನ ಮೈಲು ಗಟ್ಟಲೆ ನಡವಗ ಇಪ್ಪತ್ತೈದು ಪೈಸೆಯ ಉದ್ದ ಕಟ್ಟು ಕೈಲಿ. ಮಾತಾಡಿಗೊಂಡು ಕಡ್ಲೆ ಅಗುಕ್ಕೊಂಡು ಹೋಪಗ ದಾರಿಯೂ ಮುಗಿತ್ತು. ಕಡ್ಲೆಯು ಖಾಲಿ. ತೊಟ್ಟೆ ಬಿಚ್ಚಿ…. ಅಡಿಲಿ ಒಂದು ತುಂಡಾದರೂ ಇದ್ದಾಳಿ ನೋಡಿ ಹೋಕು. ಇನ್ನು ಸಿನೆಮಾಕ್ಕೆ ಹೋದರೆ, ಆಟಕ್ಕೆ ಹೋದರೆ ಈ ನೆಲ ಕಡ್ಲೆ ಇಲ್ಲದ್ದೇ ಕಥೆಯೇ ಇಲ್ಲೇ. ಉಪ್ಪು, ಖಾರ ಹಾಕಿ ಹೊರುದ್ದದು ಸಿಕ್ಕುಗು. ಭಾರೀ ರುಚಿ. ಇನ್ನು ರಜೆ ದಿನ ಒಗ್ಗರಣೆ ಸಟ್ಟುಗಿಲಿ ಕದ್ದು ಬೆಲ್ಲ ಮೇಣ ಕಾಸುವಗ ರಜ್ಜ ನೆಲ ಕಡ್ಲೆಯು ಹಾಕುದು. ಯೇ ದೇವರೇ ಅದರ ರುಚಿಯೇ. ಒಂದು ತುಂಡು ಕಟ್ಲೀಸಿಂಗೆ ಹತ್ತು ಪೈಸೆ ಕೊಟ್ಟು ತೆಗವ ಕೆಲಸ ಇಲ್ಲೇ. ಅಂದು ಅಂತೇ ತಿಂಬಲೇ ನೆಲ ಕಡ್ಲೆ ಉಪಯೋಗ. ಈಗ ಹಾಂಗಲ್ಲಪ್ಪಾ. ಯು ಟ್ಯೂಬ್ ಅಡುಗೆ ಯುಗ. ಬೇರೆ ಊರುಗಳ ಅಡಿಗೆಯೇ ಹೆಚ್ಚು ಮಾಡುವ ಕಾಲ. ಹಾಂಗಾಗಿ ಮನೆ ಸಾಮಾನಿನ ಪಟ್ಟಿಗೆ ನೆಲ ಕಡ್ಲೆ ಸೇರ್ಪಡೆ ಆಯಿದು. ಹೊಡಿ ಚಟ್ನಿ, ಎಣ್ಣೆಗಾಯಿ, ದೋಸೆ, ಚಟ್ನಿ, ಹೇಳಿಗೊಂಡು ನೆಲ ಕಡ್ಲೆ ಉಪಯೋಗ ಈಗ ಹೆಚ್ಚಾಯಿದು. ಮಿಶ್ಚರಿಂಗೆ…ಚಿತ್ರಾನ್ನಕ್ಕೆ ಇದು ಇಲ್ಲದ್ದೇ ಆಗನ್ನೇ. ಮಸಾಲೆ ಕಡ್ಲೆ.. ಕಡ್ಲೆ ಉಂಡೆಯು ಭಾರೀ ರುಚಿಯಪ್ಪ. ಹಲ್ಲಿಲ್ಲದ್ರೆ ಈ ಕಡ್ಲೆ ತಿಂಬದು ಕನಸಿನ ಮಾತು. “ಕಡ್ಲೆ ಇಪ್ಪಗ ಹಲ್ಲಿಲ್ಲೇ, ಹಲ್ಲಿಪ್ಪಗ ಕಡ್ಲೆ ಇಲ್ಲೇ” ಹೇಳಿ ಒಂದು ಮಾತಿದ್ದು ಹಿರಿಯರದ್ದು. ಆದರೂ ಕೆಲವು ಸಸಾರದ ಮಾತುಗೊ ಹೇಂಗೆ ಬಂತಪ್ಪಾ ಈ ಕಡ್ಳಗೆ.! “ಬಡವರ ಬಾದಾಮಿ” ಹೇಳಿ ಹೊಗಳಿಕೆಯು ಇದ್ದಪ್ಪಾ. ಹಾಂ, ಮತ್ತೊಂದು ಸಂಗತಿ ಇದ್ದು. ಕೋಪ ಬಪ್ಪದಕ್ಕೂ ಈ ಕಡ್ಲೆ ಆವುತ್ತು. ಆಶ್ಚರ್ಯ ಆತಾ? ಲೊಟ್ಟೆ ಅಲ್ಲ ಆತಾ. ಒಂದು ಕಥೆ ಕೇಳಿದ್ದೀರಾ? ಕಡ್ಲೆ ಹೊರುದು ಮೊಟ್ಟೆಲಿ ಕಟ್ಟಿ ಮಡಿಕ್ಕೊಂಬದು. ಕೋಪ ಏರುವಾಗ ಒಂದು ಕಡ್ಲೆ ಬಾಯಿಗೆ. ಸುಮಾರು ಸರ್ತಿ ಹೀಂಗೆ ಅಗುದಪ್ಪಗ ಕೋಪ ಇಳಿತ್ತದ. ಹೇಂಗೆ ಐಡಿಯಾ..(ಕಥೆಲಿಪ್ಪ ಹಾಂಗೇ ಆಚ ಕಪ್ಪು ಕಡ್ಲೆಯೇ ಆಯೆಕ್ಕೊಳಿ ಇಲ್ಲೇ). ನೆ.ಕ.ಕ. ಗ್ರೇಶಿದಷ್ಟು ಸಣ್ಣ ಅಲ್ಲ. ಮುಗಿತ್ತಿಲ್ಲೆ. ಇನ್ನು ಸಾಕು ಈ ಶುದ್ದಿ. ಒಳುದ್ದು ಇದ್ದರೆ ಇನ್ನೊಂದರಿ ಹೇಳುವೆ. ಇನ್ನು ಚಾಯ ಕುಡಿಯೆಕ್ಕು. ಆಗ ನೆಲ ಕಡ್ಲೆ ಹೊರುದು ಮಡುಗಿದ್ದೆ. ಇನ್ನು ತಿನ್ನೇಕ್ಕು. “ಉದಿಯಪ್ಪಗಳೇ ಎಂತ ಕೆಲಸ ಇತ್ತಿಲ್ಲೆಯಾ… ಹಾಂಗೇ ಕಡ್ಲೆ ಹೊರುದ್ದಾ?” ಹೇಳಿ ತಮಾಷೆ ಮಾಡಿ ನೋಡಿ. ಉಗ್ರ ಏರುಗು. ಹೆದರಿಕ್ಕೆಡಿ ಆತಾ. ಒಂದು ಕಡ್ಲೆ ತೆಗಾದು ಬಾಯಿಗೆ ಹಾಕಿಗೊಂಬೇ. ಅಕ್ಕಂಬಗ ಕಾಂಬಾ.

ದೇವರಿದ್ದ…
ಹಾಯ್ ಎಲ್ಲವೂ ಆರಾಮಿದ್ರ?ಇವತ್ತು ನಾ ಮತ್ತೊಂದು ಕಥೆ ಸಂತಿಗೆ ಬಂಜಿ… ಶಾಲೆಗೆ ಹೋಪದ್ರ ಸಂತಿಗೆ ಹನಿ ಅಜ್ಜಿ ಹೇಳ ನೀತಿನು ಕಲಿಯನ ಅಲ್ದಾ.. ಮತ್ತೆಂತಕ್ಕೆ ತಡ ಬನ್ನಿ ಕಥೆ ಕೇಳಿ… ಒಂದಲ್ಲ ಒಂದು ಊರಲ್ಲಿ ರಾಮು ಹೇಳ ಒಂದು ಬಡಿ ಮಾಣಿ ಇರ್ತ. ಅವ ಅವ್ನ ಅಜ್ಜಿ ಸಂತಿಗೆ ಪುಟಿ ಮನೇಲಿ ಇರ್ತ. ರಾಮು ರಾಶಿ ಒಳ್ಳೆಯವ, ಆದರೆ ಅವ್ಕೆ ರಾಶಿ ಬಡತನ ಇರ್ತು. ಪ್ರತಿದಿವ್ಸ ಅಜ್ಜಿ ಮತ್ತೆ ರಾಮು ಕಷ್ಟಪಟ್ಟು ದುಡದ್ರುವ ಹೊಟ್ಟೆ ತುಂಬಾ ಊಟ ಸಿಗತಿತಿಲ್ಲೆ. ಒಂದ್ ದಿವ್ಸ ರಾಮು ಕಾಡನಲ್ಲಿ ಕಟ್ಟಿಗೆ ಒಟ್ಟು ಮಾಡ್ತ ಇರಕಿರೆ ಒಂದು ಸಾಧು ಕಾಣ್ತಾ. ಸಾಧುಗೆ ರಾಶಿ ಆಸ್ರಾಗಿ ನೀರ್ ಕೇಳ್ತಾ. ರಾಮು ಅವ್ನತ್ರೆ ಇಪ್ಪ ಹನಿ ನೀರ್ ಸಾಧುಂಗೆ ಕೊಟ್ಟ. ಅವಂಗೆ ಅದ್ರಿಂದ ಕುಶಿ ಆಗಿ ತನ್ನ ಸಂಚಿ ಇಂದ ಹೊಂಬಣ್ಣದ್ದು ಬೀಜ ತೆಗೆದು ರಾಮುಗೆ ಕೊಟ್ಟ. “ತಮಾ, ಈ ಬೀಜನ ಮನೆ ಹಿತ್ತಲಲ್ಲಿ ನೆಟ್ಟು ದಿವ್ಸ ಪ್ರೀತಿಯಿಂದ ನೀರು ಹಾಕು. ಆದರೆ ರಾಶಿ ಆಸೆ ಮಾಡಡ,” ಹೇಳಿ ಸಾಧು ಹೇಳ್ತಾ. ರಾಮು ಮನಿಗೆ ಬಂದವ ಅಜ್ಜಿಗೆ ಎಲ್ಲ ಹೇಳ್ದ. ಅಜ್ಜಿ , “ಒಳ್ಳೆ ಮನಸಿಂದ ಕೊಟ್ಟಿದ್ದು ನಾವು ಗೌರವ ಕೊಡ” ಅಂತು. ಮಾರನೇ ದಿವ್ಸ ಬೀಜ ನೆಟ್ಟು ಪ್ರತಿದಿನ ನೀರು ಹಾಕಲೇ ಶುರು ಮಾಡ್ದ. ಹನಿ ದಿನದಲ್ಲಿ ಗಿಡ ಬೆಳೆದು ಆಕಾಶ ಮುಟ್ಟುವಷ್ಟು ಎತ್ತರಕ್ಕೆ ಬೆಳತ್ತು. ಅದರ ಕೊಂಬೆಲಿ ಹೊಂಬಣ್ಣದ್ದು ಹಣ್ಣು ಬಿಡಲೇ ಶುರು ಆತು. ರಾಮು ಒಂದು ಹಣ್ಣು ಕಿತ್ತು ಪ್ಯಾಟಿಗೆ ತಗ ಹೋದ. ಆಶ್ಚರ್ಯ ಎಂತಪ ಕೇಳಿರೆ ಅದು ಚಿನ್ನದ್ದೆ ಹಣ್ಣಾಗಿತ್ತು! ಅದನ್ನು ಮಾರಿ ಬಂದ್ ದುಡ್ಡಿಂದ ರಾಮು ಮತ್ತೆ ಅಜ್ಜಿ ಆರಾಮಾಗಿ ಜೀವನ ಸಾಗಸಲೇ ಹಂಕದ. ಅಚ್ಚ ಮನೆಲಿ ಶ್ಯಾಮ ಹೇಳಿ ಇದ್ದಿದ್ದ, ಅವಂಗೆ ಈ ವಿಚಾರ ಗೊತ್ತಾತು. ಅವ ಅತಿಆಸೆ ಮನಷ್ಯ. ಒಂದಿನ ರಾಮು ನಿದ್ದೆ ಮಾಡ್ತ ಇರಕಿದ್ರೆ ಗಿಡದ ಎಲ್ಲ ಹಣ್ಣು ಕದಿಯಲು ಹೋದ. ಅವ ಹಣ್ಣು ಕೀಳಲೇ ಶುರು ಮಾಡಿದ್ಕುಡ್ಯಲೆ ಗಿಡ ಗಟ್ಟಿಯ ಅಲ್ಲಾಡಲೇ ಶುರು ಆತು. ಹಣ್ಣು ಕಲ್ಲಾಗಿ ಬದಲಾಗಿ ಅವ್ನ ತಲೆ ಮೇಲೆ ಬೀಳಲೇ ಹಂಕ್ಚು. ಹೆದರಿಕ್ಯಂಡು ಶ್ಯಾಮ ಓಡೋದ. ಮರದಿನ ರಾಮು ಗಿಡದ ಹತ್ರೆ ಹೋದಾಗ ಹಣ್ಣು ಮತ್ತೆ ಚಿನ್ನದ ಹಣ್ಣಾಗಿತ್ತು. ಗಿಡ ಒಳ್ಳೆ ಮನಸ್ಸಿನವಕೆ ಮಾತ್ರವ ಸಂಪತ್ತು ಕೊಡ್ತಿತ್ತು. ಸುಮಾರು ವರ್ಷ ಕಳತ್ತು. ರಾಮು ಅವನತ್ರ ಇಪ್ಪ ದುಡ್ಡು ಅವಂಗೆ ಮಾತ್ರ ಬಳಸದೆ, ಊರಲ್ಲಿ ಶಾಲೆ, ಬಾವಿ ಮತ್ತು ದೇವಸ್ಥಾನ ಎಲ್ಲ ಕಟ್ಟಿಸಿ ಕೊಟ್ಟ. ಬಡವರಿಗೆ ತನ್ನ ಕೈಲಾಗಿದ್ದು ಸಹಾಯ ಮಾಡ್ಡ. ಹಿಂಗಾಗಿ ಊರಿನ ಜನ ಎಲ್ಲವ ಅವನ್ನ ಗೌರವಿಸ್ದ. ಒಂದಿನ ಮತ್ತೆ ಆ ಸಾಧು ಸಿಕ್ದ “ರಾಮು ನಾನು ನಿನಗೆ ಕೊಟ್ಟಿದ್ದು ಚಿನ್ನದ ಬೀಜ ಆಗಿತ್ತಿಲ್ಲೆ. ಅದು ನಿನ್ನ ಒಳ್ಳೆಯತನಕ್ಕೆ ಪರೀಕ್ಷೆ. ಒಳ್ಳೆ ಮನ್ಸು ಇದ್ದವಕೆ ಇಡೀ ಜಗತ್ತು ಬಂಗಾರ ಆಗ್ತು,” ಹೇಳಿಕ್ಕೆ ಹೋಗ್ತಾ. ನಮ್ ಜೀವನದಲ್ಲಿ ದುಡ್ಡಿಗಿಂತ ಒಳ್ಳೆಯ ಮನಸ್ಸು ಮುಖ್ಯ. ಬೇರೆಯವರ ಕಷ್ಟಕ್ಕೆ ಆಪ ಮನ್ಸು, ಪ್ರಾಮಾಣಿಕತೆ ಮತ್ತೇ ಸಹಾಯ ಮಾಡು ಗುಣ ಇದ್ದರೆ ದೇವರು ಯಾವಾಗಲೂ ನಮ್ ಸಂತಿಗೆ ಇರ್ತ”

ಹಲಸಿನ ಹಣ್ಣಿನ ಸುಟ್ಟವು ಮಾಡಿದಿರಾ?
ಹಲಸಿನ ಹಣ್ಣಿನ ಸುಟ್ಟವು ಹೇಳುದು ಮಲೆನಾಡು ಹಾಂಗೆ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಹಾಗೂ ಸಾಂಪ್ರದಾಯಿಕ ತಿಂಡಿ. ಮಳೆಗಾಲಲ್ಲಿ ಬೆಶಿ ಬೆಶಿ ತಿಂಬಲೆ ಇದು ಅದ್ಭುತ ರುಚಿ.. ಹಲಸಿನ ಹಣ್ಣು ಅಪ್ಪಲೆ ಶುರು ಅಪ್ಪಗ ಸುಟ್ಟವು ಮಾಡಿ ದೇವರಿಂಗೆ ನೈವೇದ್ಯ ಮಾಡುವ ಕ್ರಮ ಹಲವು ಮನೆಗಳಲ್ಲಿ ಇದ್ದು. ಇದರ ಮಾಡುವುದು ಹೇಂಗೆ ಹೇಳುವ ಸರಳ ಕ್ರಮವ ಇಲ್ಲಿ ವಿವರಿಸಿದ್ದೆ. ಬೇಕಾಗುಪ್ಪ ಸಾಮಗ್ರಿಗ: ಹಲಸಿನ ಹಣ್ಣಿನ ಸೊಳೆ 1 ಕಪ್ (ಬೀಜ ಪೊದೊಂಕುಳು ತೆಗದು ಸಣ್ಣಕ್ಕೆ ಕೊರದ್ದು)ಬೆಳ್ತಿಗೆ ಅಕ್ಕಿ : 1 ಕಪ್ (1 ಗಂಟೆ ಬೊದುಲುಸಿದ್ದು)ಬೆಲ್ಲ: 1/2 ರಿಂದ 3/4 ಕಪ್ (ಹಲಸಿನ ಹಣ್ಣಿನ ಸೀವು ನೋಡಿಗೊಂಡು )ತೆಂಗಿನಕಾಯಿ ತುರಿ: 1/2 ಕಪ್ಏಲಕ್ಕಿ ಹೊಡಿ: 1/4 ಚಮಚಉಪ್ಪು: 2 ಚಿಟಿಕೆಎಣ್ಣೆ ಮಾಡುವ ವಿಧಾನ ನೆನೆಸಿದ ಅಕ್ಕಿ, ಹಲಸಿನ ಹಣ್ಣಿನ ಸೊಳೆ, ಬೆಲ್ಲ, ಉಪ್ಪು ಮತ್ತು ತೆಂಗಿನಕಾಯಿ ತುರಿಯ ಮಿಕ್ಸಿ ಜಾರಿಂಗೆ ಹಾಕಿ ನೀರು ಹಾಕದೆ (ಅಥವಾ ತೀರಾ ಅಗತ್ಯಯಿದ್ದರೆ 1-2 ಚಮಚ ನೀರು ಹಾಕಿ ) ಗಟ್ಟಿಯಾಗಿ, ಹಾಂಗೆ ತರಿತರಿಯಾಗಿ ಕಡದು ಒಂದು ಪಾತ್ರಕ್ಕೆ ಹಾಯಿಕ್ಕಿ. ಅದಕ್ಕೆ ಏಲಕ್ಕಿ ಹೊಡಿ ಸೇರಿಸಿ ಲಾಯಿಕ ಕರಡಿ. ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಆಗಿರಕ್ಕೂ…ಗಟ್ಟಿ ಇದ್ದೋಳಿ ಆದ್ರೇ ಸುಟ್ಟವು ಗಟ್ಟಿ ಆವುತ್ತು.. ಹಿಟ್ಟು ಮಂದ ಆತೋಳಿ ಅನ್ನಿಸಿದರೆ ರೆಜ್ಜ ನೀರು ಹಾಕಿ.. ಬಾಣಲೆಲಿ ಎಣ್ಣೆ ಬೆಶಿ ಅಪ್ಪಲೆ ಮಡಿಗಿ.. ಒಂದರಿ ಎಣ್ಣೆ ಕಾದ ನಂತರ ಕಿಚ್ಚು ರೆಜ್ಜ ಕಮ್ಮಿ ಮಾಡಿಕ್ಕಿ… ಈಗ ಕೈಯಿಂದ ಸಣ್ಣ ಸಣ್ಣ ಉಂಡೆಗಳ ಆಕಾರಲ್ಲಿ ಹಿಟ್ಟು ಎಣ್ಣೆಗೆ ಬಿಡಿ. ಹೊಂಬಣ್ಣ ಬಪ್ಪವರೆಗೂ ಬೇಶಿ.. ರುಚಿಯಾದ ಸುಟ್ಟವು ರೆಡಿ ಆತಿದ ಕಾಫಿಗೆ.. (ಟಿಪ್: ನಿಂಗೊಗೇ ಇನ್ನು ರಜ್ಜ ಗರಿಗರಿಯಾಗಿ ಬೇಕೋಳಿದ್ದರೆ, ಹಿಟ್ಟಿಗೆ 1-2 ಚಮಚ ಚಿರೋಟಿ ರವೆ ಅಥವಾ ಅಕ್ಕಿ ಹೊಡಿ ಸೇರಿಸಿ.)

ಮುಳ್ಳುಹಂದಿ ಹೇಳಿದ ಸತ್ಯ
“ಆರಲ್ಲಿ….!”, ಇರುಳು ತೋಟಕ್ಕೆ ಜೆಟ್ ಚೇಂಜ್ ಮಾಡ್ಲೆ ಹೋಗಿತ್ತ ಚಂದ್ರಣ್ಣ°, ಎಂತದೋ ಹಂದಿದ ಹಾಂಗೆ ಆಗಿ, ಟಾರ್ಚ್ ಲೈಟ್ ಶಬ್ಧ ಬಂದ ಹೊಡೆಂಗೆ ಹಾಕಿದವು. ಎಂತೋ ಒಂದು ಆಕೃತಿ ಅತ್ಲಾಗಿ ಓಡಿದ ಹಾಂಗೆ ಆತು. ಮೈ ಪೂರ್ತಿ ಕಪ್ಪು! ಒಳಂದ ರಜ್ಜ ಪ್ರಕಾಶಮಾನವಾಗಿ ಕಂಡತ್ತು. ಕಾಂತಾರ ಸಿನಿಮಾ ನೋಡಿತ್ತ ಚಂದ್ರಣ್ಣ°, ಇದು ರಜ್ಜ ಪವರ್ ಇಪ್ಪ ಹಂದಿಯೇ ಆದಿಕ್ಕು ಹೇಳಿ ಅಂದಾಜಿ ಮಾಡಿ, ಕೂಡ್ಲೇ ಮನೆಯ ಹೊಡೆ ಓಡಿದವು. ಮುಳ್ಳುಹಂದಿಯ ಹಾಂಗೆ ಅದರ ಮೈ ಮೇಲೆ ರಜ್ಜ ಸಣ್ಣಸಣ್ಣ ಮುಳ್ಳುಗಳೂ ಕಂಡಿತ್ತು. ಮನೆಗೆ ಎತ್ತಿದ ಚಂದ್ರಣ್ಣನ ಮೈಪೂರ್ತಿ ಚೆಂಡಿ. ಹೆದರಿಕೆಯೊಟ್ಟಿಂಗೆ ಓಡಿಕೊಂಡು ಬಂದದುದೇ ಅಪ್ಪನ್ನೇ. ಜೀವಮಾನಲ್ಲಿ ಹೀಂಗಿಪ್ಪ ಅನುಭವ ಆಗಿತ್ತಿದಿಲ್ಲೆ ಚಂದ್ರಣ್ಣಂಗೆ. ಮೊದಲೆಲ್ಲಾ ಇರುಳು ಬೆಂದಿಗೆ ಕೊರವಲೆ ಎಂತೆಂಥ ತೋಟಲ್ಲೆಲ್ಲಾ ನಡಕ್ಕೊಂಡು ಹೋಯ್ದವು ಈ ಚಂದ್ರಣ್ಣ°! ಜೋರು ಉಸಿರು ಎಳಕ್ಕೊಂಡು ಮನುಗುವ ಕೋಣೆಗೆ ಹೋದವು. ಮಧ್ಯರಾತ್ರಿ ಹೀಂಗೆ ಬಂದದು, ಅವರ ಹೆಂಡತಿ ವಂದನಕ್ಕನನ್ನೂ ಒರಕ್ಕಿಂದ ಎಚ್ಚರಿಕೆ ಅಪ್ಪಾಂಗೆ ಮಾಡಿತ್ತು. “ಎಂತ ಹೀಂಗೆ ಬೆಗರಿದ್ದಿ! ಫ್ಯಾನ್ ಸ್ಪೀಡ್ ಕಮ್ಮಿ ಆತ? ಈ ಸೆಖೆಗಾಲಲ್ಲಿ ಎಷ್ಟು ಸ್ಪೀಡ್ ಇದ್ದರೂ ಕಮ್ಮಿಯೇ…..” “ಹಾಂಗಲ್ಲ ಮಾರಾಯ್ತಿ…. ತೋಟಲ್ಲಿ ಹಂದಿ ಕಂಡತ್ತು! ರಜ್ಜ ಕಾರಣೀಕ ಇಪ್ಪ ಹಾಂಗೆ ಕಂಡತ್ತು. ಚನಿಯನತ್ರೆ ಸಾಯ್ಸುಲೆ ಹೇಳ್ಲೂ ಎಡಿಯ. ಸುಮ್ಮನೆ ತಾಪತ್ರಯ!” ನಡೆದ ವಿಷಯ ಹೇಳಿದವು ಚಂದ್ರಣ್ಣ°. “ಮಗಂಗೆ ಗೊಂತಾದರೆ ಬೈಗು. ಇರುಳು ನೀರು ಹಾಕುಲೆ ಹೋಗೆಡಿ ಹೇಳಿ ಎಷ್ಟು ಸರ್ತಿ ಹೇಳಿದ್ದ°…” “ಸುಮ್ಮನೆ ಕೂರು ನೀನು. ಅವಕ್ಕೆಂತ? ಅಲ್ಲಿಂದ ಹೇಳ್ತವು. ನಮ್ಮ ತೋಟ ಹಾಳು ಮಾಡ್ಲೆ ಮನಸ್ಸಾವ್ತಾ? ಜಾಸ್ತಿ ದೂರ ಹೇಂಗೂ ಇಲ್ಲೆನ್ನೇ. ಹಾಂಗೆ ಹೋದ್ದಷ್ಟೇ. ಮುಂದೆ ವ್ಯವಸ್ಥೆ ಮಾಡುವ° ಆಟೋಮ್ಯಾಟಿಕ್ ಅಪ್ಪಾಂಗೆ!” “ಅದು ಯಾವಾಗ ಹೇಳಿ ನೋಡೆಕ್ಕು ಇನ್ನು!” ಹೇಳಿಕೊಂಡು ಹೊಡೆ ಬದಲ್ಸಿ ಮನುಗಿದವು ವಂದನಕ್ಕ°. ಇನ್ನು ಎರಡು ಗಂಟೆ ಕಳುದರೆ ಬೆಣಚ್ಚಿ ಆವ್ತು. ಒರಕ್ಕು ಬಾರದ್ದೆ ಈ ಹೊಡೆ ಆ ಹೊಡೆ ಹೇಳಿ ಹೊಡಚ್ಚಿಕೊಂಡೇ ಉದಿಯಪ್ಪದನ್ನೇ ಕಾದವು ಚಂದ್ರಣ್ಣ°. ಹೊಡೆ ಬದಲ್ಸುವಗ ವಂದನಕ್ಕಂಗೆ ಪುನಃ ಎಚ್ಚರಿಕೆ ಆಗದ್ದಾಂಗೆ ತಿರುಗುವ ಜವಾಬ್ದಾರಿಯೂ ಇತ್ತಿದು ಒಟ್ಟಿಂಗೆ! ಪಕ್ಕ ಅವಕ್ಕೆ ಹೊಳದತ್ತು, ಇದಕ್ಕೆಲ್ಲಾ ಬೆಸ್ಟ್ ಸಲಹೆ ಕೊಡ್ಲೆ ಅವ್ವೇ ಸರಿ ಹೇಳಿ. ಹಾಂಗೆ ತಲೆಗೆ ಬಂದ ಕೂಡ್ಲೇ ಗೊರಕ್ಕೆಯೂ ಬಪ್ಪಲೆ ಸುರು ಆತು. ಅದು ಪರಮಣ್ಣ°! **** ಚಂದ್ರಣ್ಣ° ಪರಮಣ್ಣನ ಮನೆಗೆ ಉದಿಯಪ್ಪಗ ಹತ್ತು ಗಂಟೆ ಆಯೆಕ್ಕಾರೇ ಬಂದವು. “ಇದಾ ವನಜಾ°! ಹಲಸಿನಕಾಯಿ ದೋಸೆ ಎರಡು ಎರೆ. ಚಂದ್ರಣ್ಣ° ಬಂದ” ಹೆರ ಹಾಲಿಲ್ಲಿ (ಹಾಲ್) ಕೂದುಕೊಂಡು ಬೆಶಿ ಚಾಯ ಕುಡುಕ್ಕೊಂಡಿತ್ತ ಪರಮಣ್ಣ° ಅವರ ಹೆಂಡತಿಗೆ ಹೇಳಿದವು. “ಬೇಡಣ್ಣ, ಮನೆಲ್ಲಿ ಉಂಡೆ ನೀರುಳ್ಳಿ ಕೊದಿಲು. ಆಗಿಯೇ ಬಂದದು” ಹೇಳಿಕೊಂಡೇ ಒಳ ಬಂದವು ಚಂದ್ರಣ್ಣ°. “ಎಂತ ಮಾರಾಯ! ತಲೆಬೆಶಿಲ್ಲಿ ಇಪ್ಪಾಂಗೆ ಕಾಣ್ತು.” ಚಂದ್ರಣ್ಣನ ನೋಡಿಯೇ ಲೆಕ್ಕ ಹಾಕಿದವು ಪರಮಣ್ಣ°. “ಅಪ್ಪಣ್ಣ°. ನಿನ್ನೆ ತೋಟಲ್ಲಿ ಇರುಳು ಮುಳ್ಳುಹಂದಿ ನೋಡಿ ಅವಸ್ಥೆ ಆದ್ದಲ್ಲಾ ಎನ್ನದು!” ಹೇಳಿಕೊಂಡು ಕುರ್ಚಿಲ್ಲಿ ಕೂದವು. “ಅಡಕ್ಕೆ ಹೆಕ್ಕುಲೆ ಅದೇ ಬಪ್ಪದ ಹಾಂಗಾರೆ? ಬಿದ್ದಡಕ್ಕೆ ಒಳಿತ್ತೇ ಇಲ್ಲೆ ಹೇಳಿಕೊಂಡು ಇತ್ತಿದೆ ಅಲ್ದಾ?” “ಮುಳ್ಳಂದಿ ಅಡಕ್ಕೆ ತಿಂಗಾ!? ವೆನಿಲ್ಲಾ ಬಳ್ಳಿದೇ ಒಂದು ರಜ್ಜ ಕಡಮ್ಮೆ ಕಂಡತ್ತು!”, ಹೇಳಿದವು ಚಂದ್ರಣ್ಣ°. ರಜ್ಜ ಯೋಚನೆ ಮಾಡಿದ ಪರಮಣ್ಣ ಕೇಳಿದವು, “ಹಂದಿ ಸರೀ ಕಂಡಿದಾ?” “ಅಪ್ಪಣ್ಣ°. ದಪ್ಪಕ್ಕೆ, ಮುಳ್ಳು ಮುಳ್ಳು ಇತ್ತಿದು. ಒಳಂದ ಎಂತೋ ಬೆಣಚ್ಚಿ ಬತ್ತಾ ಇತ್ತಿದು. ಈ ಸಿನೇಮಲ್ಲಿ ದೇವರು ಪ್ರತ್ಯಕ್ಷಪ್ಪಗ ಬಪ್ಪ ಬೆಣಚ್ಚಿಯ ಹಾಂಗೇ! ಹಾಂಗಾಗಿ ಕೊಲ್ಲುಲೂ ಹೆದರಿಕೆಯೇ!” ಗಾಬರಿಲ್ಲಿ ಹೇಳಿದವು ಚಂದ್ರಣ್ಣ°. “ಇದಾ, ನೀನು ತಲೆಬೆಶಿ ಮಾಡೆಡ! ನೀನು ಹೇಳುದು ನೋಡಿರೆ ಇದು ಮನುಷ್ಯರ ಕೆಲಸವೇ ಹೇಳಿ ಕಾಣ್ತು! ಟಾರ್ಚ್ ಆದಿಕ್ಕು ನೀನು ಹೇಳಿದ ಪ್ರಭೆ! ಎಂತಕೆ ಹೇಳಿರೆ, ಪ್ರಾಣಿಗೋಕ್ಕೆ ದುರಾಸೆ ಬಾರ. ವೆನಿಲ್ಲಾ ಬಳ್ಳಿ ಅದಕ್ಕೆಂತಕೆ ಮಾರಾಯ? ಇಂದಿರುಳೇ ಎನ್ನ ಕೆಲಸದ್ದು ಅಂಗಾರನ ಕಳ್ಸುತ್ತೆ. ಅದಕ್ಕೆ ಇದೆಲ್ಲಾ ಧೈರ್ಯ ಜಾಸ್ತಿ. ಕೂಡ್ಲೇ ಹಿಡಿದು ಚೆಕ್ ಮಾಡುಗು….” ಉಪಾಯ ಹೇಳಿದವು ಪರಮಣ್ಣ°. ಅಷ್ಟಪ್ಪಗ ವನಜಕ್ಕ° ಕಾಪಿ ತಂದು ಕೊಟ್ಟವು. ಬಾಳೆಹಣ್ಣು ಹಲ್ವಾ ಮಾಡಿತ್ತದು ಇದ್ದತ್ತು. ಚಂದ್ರಣ್ಣ° ಹೆರಡುವಗ ಪರಮಣ್ಣ° ಹೇಳಿದವು, “ಇದಾ ಅಣ್ಣ, ಮಾಬಲಣ್ಣನ ಮನೆಗೆ ಬತ್ತೆಯಾ? ಹೋಗಿಬಪ್ಪ°. ಅವ° ಅಡಕ್ಕೆ ಸೊಲಿವ ಮಿಷನ್ ತೆಕ್ಕೊಂಡಿದ°! ಬಾರೀ ಫಸ್ಟ್ ಆವ್ತಡ. ಹೇಂಗಿದ್ದು ನೋಡಿ ಬಪ್ಪ°. ಉಪಯೋಗ ಇದ್ದರೆ ತೆಕ್ಕೊಂಬ° ಹೇಳಿ” “ಓಹ್ ಅಪ್ಪಾ? ಅವಂಗೆ ಬೇಕಪ್ಪಾ. ಅಡಕ್ಕೆ ಬೇಕಾದಷ್ಟು ಆವ್ತು ಅವಂಗೆ°.” ಚಂದ್ರಣ್ಣ° ಒಟ್ಟಿಂಗೆ ಹೆರಟವು. **** “ಬನ್ನಿ ಬನ್ನಿ….” ಗೇಟು ತೆಗೆದು ಮನೆಯ ಜಾಲಿಂಗೆ ಬಂದ ಇಬ್ರ ಕಂಡು ಮಾಬಲಣ್ಣನ ಹೆಂಡತಿ ಪರಿಮಳಕ್ಕ° ದಿನುಗೇಳಿದವು. “ಅಣ್ಣ ಇದ್ದವೋ?” ಕೇಳಿದವು ಪರಮಣ್ಣ°. “ಅವಕ್ಕೆ ಜ್ವರ ಬಾವ. ಉದಿಯಪ್ಪಗ ಸಡನ್ ಸುರು ಆದ್ದು. ಒಳ್ಳೆ ಚಳಿ ಇದ್ದು ಹೇಳಿಕೊಂಡಿತ್ತಿದವು. ಕಳುದವರ್ಷ ಮಾರಿಕೊಂಡು ಕಾಶ್ಮೀರ ಕಂಬಳಿಯವು ಬಂದಿತ್ತಿದವಲ್ಲ. ಅದರ ಉದ್ಘಾಟನೆ ಮಾಡಿದ್ದವು ಇಂದು! ಹೊದಕ್ಕೊಂಡು ಮನುಗಿದ್ದವು…” ಹೇಳಿದವು ಪರಿಮಳಕ್ಕ°. “ಅಣ್ಣಂಗೆ ಸೆಖೆ ಯಾವಾಗಲೂ. ಈಗ ಆದರೂ ಅದು ಉಪಯೋಗಕ್ಕೆ ಬಂತನ್ನೇ” ನೆಗೆ ಮಾಡಿಕೊಂಡು ಹೇಳಿದವು ಚಂದ್ರಣ್ಣ°. “ಅದು ವಿಪರೀತ ಕಾಸ್ಟ್ಲಿ. ಕಾಶ್ಮೀರಂದ ತರ್ಸಿದ್ದು ಅಲ್ದಾ. ಮಾಬಲಣ್ಣ ಗಟ್ಟಿ. ಇಲ್ಲೆಲ್ಲಾ ಅವ° ಒಬ್ಬನೇ ತೆಕ್ಕೊಂಡದು!” ಹುಬ್ಬೇರ್ಸಿಕೊಂಡು ಹೇಳಿದವು ಪರಮಣ್ಣ°. ಪರಿಮಳಕ್ಕಂಗೆ ನಾಚಿಗೆ ಆತು. “ಹಾಂಗೆಂತ ಇಲ್ಲೆ ಬಾವ. ಇವಕ್ಕೆ ಎಂತದೋ

ತಾಳ್ಮೆ: ಬದುಕಿನ ಹಾದಿಗೆ ಬೆಣಚ್ಚಪ್ಪ ಅಮೂಲ್ಯ ಮೌಲ್ಯ
ಮಾನವನ ಜೀವನ ಒಂದು ಅದ್ಭುತ ಕಾವ್ಯದ ಹಾಂಗಿಪ್ಪದು. ಅದರ ಪ್ರತಿಯೊಂದು ಅಧ್ಯಾಯಲ್ಲೂ ಹೊಸ ಅನುಭವಂಗೊ, ಹೊಸ ಸವಾಲುಗೊ, ಹೊಸ ಪಾಠಂಗೊ ಅಡಗಿರುತ್ತು. ಕೆಲವು ಸರ್ತಿ ಜೀವನ ಹೂವಿನ ಹಾಸಿಗೆಯ ಹಾಂಗೆ ಚೆಂದಕಿದ್ದರೆ, ಇನ್ನೊಳುದ ಸಮಯಲ್ಲಿ ಮುಳ್ಳಿನ ಹಾದಿಯ ಹಾಂಗೆ ಕಠಿಣವಾಗಿ ಕಾಣುತ್ತು. ಸಂತೋಷ, ದುಃಖ, ಗೆಲುವು, ಸೋಲು, ಆಶೆ ಮತ್ತು ನಿರಾಶೆ ಇವೆಲ್ಲವೂ ಜೀವನದ ಅವಿಭಾಜ್ಯ ಭಾಗಂಗಳೇ. ಈ ಎಲ್ಲ ಅನುಭವಂಗಳ ನಡುವೆ ಮನುಷ್ಯನ ಸಮತೋಲನಂದ ಮುನ್ನಡೆಶುವ ಶಕ್ತಿಯೇ ತಾಳ್ಮೆ. ತಾಳ್ಮೆ ಹೇಳಿದರೆ ಕೇವಲ ಕಾಯುವಿಕೆ ಅಲ್ಲ. ಅದು ಸಂಕಷ್ಟಂಗಳ ನಡುವೆ ಸ್ಥಿರವಾಗಿ ನಿಂಬಲೆಡಿಗಪ್ಪ ಹಾಂಗೆ ಮಾಡುವ ಧೈರ್ಯ. ಅದು ನಿರೀಕ್ಷೆಗಳ ನಡುವೆಯೂ ಮನಸ್ಸಿನ ಶಾಂತಿಯ ಕಾಪಾಡಿಗೊಂಬ ಸಾಮರ್ಥ್ಯ. ಅದು ಬದುಕಿನ ಅಲೆಗಳ ನಡುವೆ ಮುಳುಗದ್ದೆ ತೇಲುವ ಆತ್ಮವಿಶ್ವಾಸ. ಜೀವನಲ್ಲಿ ಯಶಸ್ಸು ಸಾಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ತಾಳ್ಮೆಯ ಒಂದು ಮಹಾನ್ ಕಥೆ ಅಡಗಿರುತ್ತು. ಇಂದಿನ ಜಗತ್ತು ವೇಗದ ಜಗತ್ತು. ಕ್ಷಣಾರ್ಧಲ್ಲಿ ಮಾಹಿತಿ ಸಿಕ್ಕುತ್ತು. ಕೆಲವೇ ನಿಮಿಷಂಗಳಲ್ಲಿ ಕೆಲಸಂಗೊ ಮುಗಿತ್ತು. ತಂತ್ರಜ್ಞಾನ ಬದುಕಿನ ಸುಲಭಗೊಳಿಸಿದರೂ, ಮನುಷ್ಯನ ಕಾಯುವ ಶಕ್ತಿಯ ಕಡಮ್ಮೆ ಮಾಡಿದ್ದು. ಎಲ್ಲವೂ ತಕ್ಷಣ ಸಿಕ್ಕೇಕು ಹೇಳುವ ಮನೋಭಾವ ಬೆಳದ್ದು. ಆದರೆ ಪ್ರಕೃತಿಯ ನಿಯಮಂಗೊ ಇನ್ನೂ ಅದೇ ಆಗಿದ್ದನ್ನೇ. ಒಂದು ಬೀಜ ಬಿತ್ತಿದ ತಕ್ಷಣ ಮರ ಆವ್ತಿಲ್ಲೆ. ಒಂದು ಮುಕುಟು ಅರಳಲೆ ಅದರದ್ದೇ ಆದ ಸಮಯವ ತೆಕ್ಕೊಳ್ತು ಅಲ್ಲದಾ. ಒಂದು ಬಾಬೆ ದೊಡ್ಡ ವ್ಯಕ್ತಿ ಆಯೆಕಾರೆ ವರ್ಷಂಗಳ ಕಾಲ ಬೇಕಾವುತ್ತಿಲ್ಲೆಯಾ? ಈ ಸತ್ಯವ ಅರಿತಪ್ಪಗ ತಾಳ್ಮೆಯ ಮಹತ್ವ ಸ್ಪಷ್ಟ ಆವ್ತು. ಪ್ರಕೃತಿ ನಮಗೆ ತಾಳ್ಮೆಯ ಮಹತ್ವವ ಪ್ರತಿನಿತ್ಯ ಬೋಧಿಸುತ್ತು. ಸೂರ್ಯ ಅವನ ಸಮಯಕ್ಕೆ ಉದಯಿಸುತ್ತ॰. ಚಂದ್ರ ನಿಧಾನವಾಗಿ ಅವನ ಆಕಾರ ಬದಲಾಯಿಸುತ್ತ॰. ಋತುಗಳೂ ಅವರ ಕ್ರಮವ ಪಾಲಿಸುತ್ತವು. ಯಾವುದೇ ಪ್ರಕ್ರಿಯೆಯೂ ಅರ್ಜೆಂಟಿಲಿ ನಡೆತ್ತಿಲ್ಲೆ. ಆದರೂ ಎಲ್ಲವೂ ಪರಿಪೂರ್ಣವಾಗಿ ನಡೆತ್ತು. ಜೀವನವೂ ಹಾಂಗೆಯೇ. ಸಮಯದೊಟ್ಟಿಂಗೆ ಬೆಳವ ಸಂಗತಿಗೊಕ್ಕೆ ನಾವು ಸಮಯ ಕೊಡೆಕು. ತಾಳ್ಮೆ ಮನುಷ್ಯನ ವ್ಯಕ್ತಿತ್ವವ ರೂಪಿಸುವ ಅಮೂಲ್ಯ ಗುಣ. ಸಂಕಷ್ಟದ ಸಮಯಲ್ಲಿ ಎಲ್ಲೋರೂ ಸಮಾಧಾನಂದ ಇಪ್ಪಲೆ ಸಾಧ್ಯ ಇಲ್ಲೆ. ಅನೇಕರು ಆತುರದ ನಿರ್ಧಾರಂಗಳ ತೆಕ್ಕೊಳ್ಳುತ್ತವು. ಕೆಲವರು ನಿರಾಶೆಗೆ ಒಳಗಾವುತ್ತವು. ಆದರೆ ತಾಳ್ಮೆಲಿಪ್ಪ ವ್ಯಕ್ತಿ ಪರಿಸ್ಥಿತಿಯ ಅರ್ಥಮಾಡಿಗೊಂಡು ಸರಿಯಾದ ನಿರ್ಧಾರವ ತೆಕ್ಕೊಳ್ಳುತ್ತ॰. ಅವ॰ ಸಮಸ್ಯೆಯ ನೋಡಿ ಹೆದರದ್ದೆ, ಅದರ ಪರಿಹರಿಸುವ ಮಾರ್ಗವ ಹುಡುಕುತ್ತ॰. ಜೀವನಲ್ಲಿ ಸೋಲುಗಳೂ ಅನಿವಾರ್ಯ. ಯಾವ ವ್ಯಕ್ತಿಯೂ ನಿರಂತರವಾಗಿ ಗೆಲ್ಲಲೆ ಸಾಧ್ಯವೇ ಇಲ್ಲೆ. ಸೋಲುಗೊ ಜೀವನದ ಶಿಕ್ಷಕರು. ಅದು ನಮ್ಮ ತಪ್ಪುಗಳ ತೋರಿಸುತ್ತು. ನಮ್ಮ ಸಾಮರ್ಥ್ಯವ ಪರೀಕ್ಷಿಸುತ್ತು. ಹಾಂಗೇ ಸೋಲಿನ ನಂತರ ಎದ್ದು ನಿಂಬಲೆ ತಾಳ್ಮೆ ಬೇಕು. ಒಂದು ವಿಫಲತೆಯ ನಂತರ ಜೀವನ ಮುಗಿತ್ತಿಲ್ಲೆ. ಅದು ಹೊಸ ಆರಂಭದ ಸಂಕೇತ ಆಗಿಕ್ಕನ್ನೇ. ಇತಿಹಾಸದ ಪುಟಂಗಳ ತೆರದು ನೋಡಿದರೆ ತಾಳ್ಮೆಯ ಅನೇಕ ಉದಾಹರಣೆಗೊ ಕಾಂಬಲೆ ಸಿಕ್ಕುತ್ತು. ಮಹಾನ್ ವಿಜ್ಞಾನಿಗೊ ವರ್ಷಂಗಳ ಕಾಲ ಪ್ರಯೋಗಂಗಳ ನಡೆಸಿ ಯಶಸ್ಸು ಕಂಡದು. ಅನೇಕ ಸಮಾಜ ಸುಧಾರಕರು ವಿರೋಧ ಮತ್ತು ಟೀಕೆಗಳ ಸಹಿಸಿಗೊಂಡು ತಮ್ಮ ಗುರಿಗಳ ಸಾಧಿಸಿದ್ದು. ಅವರ ಸಾಧನೆಗಳ ಹಿಂದೆ ಅಸಾಧಾರಣ ಪ್ರತಿಭೆ ಇದ್ದ ಹಾಂಗೇ, ಅಪಾರ ತಾಳ್ಮೆಯೂ ಇತ್ತು. ವಿದ್ಯಾರ್ಥಿಗಳ ಜೀವನಲ್ಲಿ ತಾಳ್ಮೆಯ ಪಾತ್ರ ಅತ್ಯಂತ ಮಹತ್ವದ್ದು. ಜ್ಞಾನವ ಪಡವದು ಒಂದು ದಿನದ ಕೆಲಸ ಅಲ್ಲ. ಅದು ನಿರಂತರ ಪ್ರಯತ್ನದ ಫಲ. ಪ್ರತಿದಿನದ ಓದು, ಅಭ್ಯಾಸ ಮತ್ತು ಶಿಸ್ತು ಕೊನೆಗೆ ಯಶಸ್ಸಿಂಗೆ ದಾರಿ ಮಾಡಿಕೊಡುತ್ತು. ಅನೇಕ ವಿದ್ಯಾರ್ಥಿಗೊ ತಕ್ಷಣ ಫಲಿತಾಂಶ ಸಿಕ್ಕದ್ದಿಪ್ಪಗ ನಿರಾಶರಾವ್ತವು. ಆದರೆ ಶಿಕ್ಷಣದ ನಿಜವಾದ ಫಲ ದೀರ್ಘಾವಧಿಲಿ ಸಿಕ್ಕುದು ಅಲ್ಲದಾ? ತಾಳ್ಮೆಂದ ಕಲಿವ ವಿದ್ಯಾರ್ಥಿ ಜೀವನಲ್ಲಿ ಉತ್ತಮ ಸಾಧನೆ ಮಾಡುತ್ತ॰. ಕುಟುಂಬ ಜೀವನಲ್ಲಿಯೂ ತಾಳ್ಮೆ ಅನಿವಾರ್ಯವೇ. ಕುಟುಂಬ ಹೇಳಿದರೆ ವಿಭಿನ್ನ ವ್ಯಕ್ತಿತ್ವಂಗಳ ಸಂಗಮ. ಪ್ರತಿಯೊಬ್ಬರ ಅಭಿಪ್ರಾಯ, ಭಾವನೆ ಮತ್ತು ನಿರೀಕ್ಷೆಗಳು ವಿಭಿನ್ನ ಆಗಿರುತ್ತು. ಪರಸ್ಪರ ಅರ್ಥಮಾಡಿಗೊಂಬಲೆ, ಗೌರವಿಸಲೆ ತಾಳ್ಮೆ ಅಗತ್ಯ. ತಾಳ್ಮೆ ಇಲ್ಲದ್ದರೆ ಸಣ್ಣ ಭಿನ್ನಾಭಿಪ್ರಾಯಂಗಳೇ ದೊಡ್ಡ ಸಮಸ್ಯೆ ಅಕ್ಕು. ಪ್ರೀತಿ ಸಂಬಂಧಂಗಳ ಕಟ್ಟುಗು, ಆದರೆ ತಾಳ್ಮೆ ಅವುಗಳ ಉಳಿಸುತ್ತು. ಸ್ನೇಹಲ್ಲಿಯೂ ತಾಳ್ಮೆಯ ಮೌಲ್ಯ ಅಪಾರ. ನಿಜವಾದ ಸ್ನೇಹ ಪರಸ್ಪರ ಅರ್ಥೈಸಿಕೊಳ್ಳುವಿಕೆಂದ ಬೆಳೆತ್ತು. ಸ್ನೇಹಿತರ ತಪ್ಪುಗಳ ಕ್ಷಮಿಸುದು, ಅವರ ಸಂಕಷ್ಟದ ಸಮಯಲ್ಲಿ ಜೊತೆಲಿ ಇಪ್ಪದು ಮತ್ತು ಅವಕ್ಕೆ ಬೆಂಬಲ ಕೊಡುದು ತಾಳ್ಮೆಯ ಲಕ್ಷಣಂಗೊ. ಆತುರದ ನಿರ್ಧಾರಂಗೊ ಅನೇಕ ಸಂಬಂಧಂಗಳ ಮುರಿಗು. ಆದರೆ ತಾಳ್ಮೆ ಸಂಬಂಧಂಗಳ ಗಟ್ಟಿಗೊಳಿಸುತ್ತು. ಇಂದಿನ ಸಮಾಜಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಾ ಇಪ್ಪದು ಒಂದು ದೊಡ್ಡ ಸವಾಲೇ. ಸ್ಪರ್ಧಾತ್ಮಕ ಜೀವನ, ಉದ್ಯೋಗದ ಒತ್ತಡ, ಆರ್ಥಿಕ ಸಮಸ್ಯೆಗೊ ಮತ್ತು ಸಾಮಾಜಿಕ ನಿರೀಕ್ಷೆಗೊ ಅನೇಕ ಜನರ ಆತಂಕಕ್ಕೆ ತಳ್ಳುತ್ತಾ ಇದ್ದು. ಇಂತಹ ಸಂದರ್ಭಂಗಳಲ್ಲಿ ತಾಳ್ಮೆ ಮನಸ್ಸಿಂಗೆ ನೆಮ್ಮದಿಯ ಕೊಡುತ್ತು. ಅದು ಭಾವನೆಗಳ ನಿಯಂತ್ರಿಸಲೆ ಸಹಾಯ ಮಾಡುತ್ತು. ಸಮಸ್ಯೆಗಳ ಸಮಚಿತ್ತಂದ ಎದುರಿಸಲೆ ಶಕ್ತಿ ಕೊಡುತ್ತು. ತಾಳ್ಮೆ ಮತ್ತು ಆತ್ಮವಿಶ್ವಾಸ ಪರಸ್ಪರ ಸಂಬಂಧ ಹೊಂದಿದ್ದು. ಆತ್ಮವಿಶ್ವಾಸ ಗುರಿಯತ್ತ ಸಾಗಲೆ ಪ್ರೇರೇಪಿಸಿದರೆ, ತಾಳ್ಮೆ ಆ ಗುರಿಯ ತಲುಪುವವರೆಗೆ ಸ್ಥಿರವಾಗಿ ಇಪ್ಪಲೆ ಸಹಾಯ ಮಾಡುತ್ತು. ಈ ಎರಡೂ ಗುಣಂಗಳೂ ಒಂದಾಗಿದ್ದರೆ ಯಾವುದೇ ಸವಾಲಿನ ಎದುರಿಸಲೆ ಸಾಧ್ಯ ಆವ್ತು. ಪ್ರಕೃತಿಲ್ಲಿಪ್ಪ ನದಿಯ ಕಥೆ ನವಗೆ ಮಹತ್ವದ ಪಾಠವ ಕಲಿಶುತ್ತು. ನದಿ ತನ್ನ ದಾರಿಲ್ಲಿಪ್ಪ ಬಂಡೆಗಳ ಒಡೆತ್ತಿಲ್ಲೆ. ಅವುಗಳ ಸುತ್ತಲೂ ಹರಿತ್ತಾ ಮುಂದೆ ಸಾಗುತ್ತು. ಅದರ ಗುರಿ ಸಾಗರವ ಸೇರುದು ಮಾತ್ರ. ಅದು ತನ್ನ ಪ್ರಯಾಣಲ್ಲಿ ತಾಳ್ಮೆಯ ಕಳಕ್ಕೊಳ್ಳುತ್ತಿಲ್ಲೆ. ಕೊನೆಗೆ ತನ್ನ ಗುರಿಯ

ಹೂಗಿನ ಘಮ ಘಮ
ರಜೆಲಿ ಅಜ್ಜನ ಮನಗೆ ಬಂದಳಿದ ಎಂಗಳ ಪುಳ್ಳಿಯಕ್ಕೋ ಎನ್ನ ನೋಡಿದ ಕೂಡ್ಲೇ “ಅಜ್ಜೀ ನಿನಗೆ ಇಲ್ಲಿ ಗಾರ್ಡನ್ ಮಾಡ್ಲೆ ಜಾಗೆ ಇಲ್ಲೆಯಾ?” ಕೇಳಿದವು. ಅಂಬಗ ಆನು ಆಶ್ಚರ್ಯಲ್ಲಿ “ಇದ್ದಪ್ಪಾ. ಏಕಿಲ್ಲೆ. ಆದರೆ ಬೇಸಗೆಲಿ ಜಾಲಿಲಿ ಅಡಕ್ಕೆ ಹಾಕುಲಿಪ್ಪ ಕಾರಣ ಹೂಗಿನ ಸೆಸಿಗಳ, ನೆಟ್ಟಿ ಸೆಸಿಗಳ ಎಲ್ಲಾ ಜಾಲ ಕರೆ ಕರೇಲಿ ನೆಡೆಕ್ಕಾವುತ್ತು. ಆದರೆ ಅಲ್ಲಿ ಅದಕ್ಕೆ ಬೇಕಾಷ್ಟು ಜಾಗೆ ಇದ್ದು. ಅಲ್ಲಾ ನಿಂಗ ಬಂದ ಕೂಡ್ಲೇ ಈ ಪ್ರಶ್ನೆ ಎಂತಗೆ ಕೇಳಿದ್ದು…?” ಹೇಳಿ ಕುತೂಹಲ ತಡೆಯದ್ದೆ ಕೇಳಿದೆ. ಅಂಬಗ ಕೂಡ್ಲೇ ಎನ್ನ ಎರಡನೆಯ ತುಂಟಿ ಪುಳ್ಳಿ “ಎಂತಗೆ ಕೇಳಿದ್ದು ಹೇಳಿರೆ ನಿನ್ನ ತಲೆಲಿ ದೊಡ್ಡ ಹೂಗಿನ ತೋಟವೇ ಕಾಣ್ತಜ್ಜೀ . ಹಾಂಗೆ ಗಾರ್ಡನ್ ಮಾಡ್ಲೆ ಜಾಗೆ ಇಲ್ಲದ್ದೆ ತಲೆಲಿಯೇ ಸೆಸಿಗಳ ನೆಟ್ಟದಾ ಹೇಳಿ ಕೇಳಿದ್ದು” ಹೇಳಿತ್ತು.! ಓ…. ಈಗ ಗೊಂತಾತು. ತುಂಬ ಹೂಗು ಸೂಡಿದ್ದಕ್ಕೆ ನಿಂಗ ಎನ್ನ ತಮಾಷೆ ಮಾಡ್ತೀರಾ? ನಿಲ್ಲಿ…. ಇಲ್ಲಿ ಇಪ್ಪಷ್ಟೂ ದಿನವೂ ನಿಂಗೊಗೂದೇ ಆನು ಹೀಂಗೇ ಹೂಗು ಸೂಡ್ಸುತ್ತೆ ನೋಡೀ…” ಹೇಳಿ ಆನುದೇ ಅವರ ಕಾಲೆಳದೆ. ಅಪ್ಪು. ಎನಗೆ ಹೂಗು ಹೇಳಿರೆ ತುಂಬಾ ಇಷ್ಟ. ಅವು ಬಂದ ಆ ದಿನ ಆನು ನಿಜವಾಗಿಯೂ ತುಂಬ ಹೂಗು ಸೂಡಿತ್ತಿದ್ದೆ . ಅಂಬಗ ಹೇಳಿಕೇಳಿ ಏಪ್ರಿಲ್ ತಿಂಗಳು. ಮಲ್ಲಿಗೆ ಧಾರಾಳ ಅಪ್ಪ ಸಮಯ . ಯಾವ ಹೂಗೇ ಆದರೂ ಎನಗೆ ಪ್ರೀತಿ. ಹಾಂಗಿಪ್ಪಗ ಮಲ್ಲಿಗೆಯ ಬಿಡುವ ಮಾತಿದ್ದಾ? ಆದಿನ ಆನು ಹೇಂಗೆ ಸೂಡಿತ್ತಿದ್ದೆ ಹೇಳಿದರೆ ಜೆಡೆ ಬುಡಕ್ಕೆ ಎರಡು ಮಡಿಕ್ಕೆ ಮಲ್ಲಿಗೆ ಮಾಲೆ ಉರುಟಾಗಿ ಮಡುಗಿ ಅದರ ನಡುವಿಂಗೆ ಒಂದು ದೊಡ್ಡ ಗುಲಾಬಿ, ಅದರ ಸುತ್ತಲೂ ದುಂಡು ಮಲ್ಲಿಗೆ ಮಾಲೆ ಸುತ್ತಿ ಮೇಲಂದ ಎರಡು ಮಡಿಕ್ಕೆ ಮಂಗಳೂರು ಮಲ್ಲಿಗೆ ಮಾಲೆ ಮತ್ತೆ ಉರುಟಾಗಿಕೆಳಾಂಗೆ ಸುತ್ತಿದ್ದೆ. ಹಾಂಗೆ ಬೆಳಿಯೊಟ್ಟಿಂಗೆ ಮ್ಯಾಚ್ ಅಕ್ಕು ಹೇಳಿ ಎಡೆ ಎಡೆಲಿ ನಾಲ್ಕು ಮಲ್ಲಿಗೆ ಎಲೆಯನ್ನೂ, ಒಂದೆರಡು ಗುಲಾಬಿ ಎಲೆಯನ್ನೂ ಚೆಂದದ ಎರಡು ಕ್ರೋಟನ್ ಸೊಪ್ಪನ್ನು ಕೂಡಾ ಮಡಿಗಿತ್ತಿದ್ದೆ. ಇಷ್ಟೆಲ್ಲಾ ಮಾಡಿದ ಮೇಲೆ ಸೂಡಿದ್ದು ಹೇಂಗೆ ಕಾಣ್ತು ಹೇಳಿ ನೋಡೆಡದಾ? ಹಾಂಗೆ ಎಂಗಳ ರೂಮಿನ ಕಪಾಟಿನ ದೊಡ್ಡ ಕನ್ನಡಿಗೆ ಬೆನ್ನು ಹಾಕಿ ನಿಂದು ಸಣ್ಣಕನ್ನಡಿ ಎದುರಂಗೆ ಹಿಡುದು ನೋಡಿದೆ. ಊಹೂ ಸರೀ ಕಂಡತ್ತಿಲ್ಲೆ . ಒಂದು ಹೊಡೆಂದ ರಜಾ ಕಂಡತ್ತಷ್ಟೇ. ಬೇಡ. ಯಜಮಾನ್ರ ಹತ್ತರೆ ಮೊಬೈಲಿಲ್ಲಿ ತಲೆ ಹಿಂದಾಣ ಪಟ ತೆಗವಲೆ ಹೇಳುವ ಹೇಳಿಗೊಂಡು ಹತ್ತು ಸರ್ತಿ ದೆನಿಗೋಳಿದ ಮೇಲೆ ಕಷ್ಟಲ್ಲಿ ಪರೆಂಚಿಗೊಂಡು ಬಂದು ಒಂದು ಪಟ ತೆಗದವು. ಕೂಡ್ಲೇ ಆನು ಗ್ಯಾಲರಿಗೆ ಹೋಗಿ ಪಟವ ದೊಡ್ಡ ಮಾಡಿ ನೋಡಿದೆ . ಇಲ್ಲೆಪ್ಪಾ ಹೂಗು ಸೂಡಿದ್ದು ಅಷ್ಟು ಹೆಚ್ಚೆಂತ ಕಾಣ್ತಿಲ್ಲೆ. ಚೆಂದವೇ ಕಾಣ್ತು ಹೇಳಿ ಎನ್ನ ಮನಸ್ಸಿಂಗೆ ಕಂಡತ್ತು. ಮಕ್ಕೊ ಬರೆಕ್ಕಾದರೆ 25 ದಿನದ ಹಿಂದೆ ಏಪ್ರಿಲ್ ಲಿ ಒಂದು ಮಳೆ ಬಂದಿದ್ದ ಕಾರಣ ಅದುವರೆಗೂ ಎಷ್ಟು ನೀರು ಬಿಟ್ಟರೂ “ಎಂಗೊ ಮಳೆ ನೀರು ಬಿದ್ದರೆ ಮಾತ್ರಾ ಮುಕುಟು ಬಿಡುದು” ಹೇಳಿ ಮಲ್ಲಿಗೆ ಸೆಸಿಗೊ ಸ್ತ್ರೈಕ್ ಮಾಡಿ ಕೂದಿತ್ತಿದ್ದೋವು . ಆದರೆ ಸುರೂಗಾಣ ಮಳೆ ಬಂತು ನೋಡೀ… .ಕೂಡ್ಲೇ ಎಲ್ಲಾ ಮಲ್ಲಿಗೆ ಸೆಸಿಗೋ ‘ಏ …..’ ಹೇಳಿಗೊಂಡು ಚಿಗುರಿ ಚಿಗುರೀ ತುಂಬಾ ಮುಕುಟು ಬಿಟ್ಟವು. ಎನಗೋ ಮಕ್ಕೊ ಪುಳ್ಳಿಯಕ್ಕೋ ಬಪ್ಪ ಸಮಯಕ್ಕೇ ಮಲ್ಲಿಗೆ ಆವುತ್ತನ್ನೇ ಹೇಳಿ ತುಂಬಾ ಸಂತೋಷ. ಹಾಂಗೇ ಅವಕ್ಕೂ ಮಲ್ಲಿಗೆ ಸೂಡುದು ಹೇಳಿರೆ ತುಂಬಾ ಇಷ್ಟವೇ. ಈ ಮಲ್ಲಿಗೆ ಅಪ್ಪ ಸಮಯಲ್ಲಿ ನೋಡೆಕ್ಕು ಹೆಮ್ಮಕ್ಕಳ ಮೋರೆಲಿ ಕುಶಿ! ಬೇರೆ ಎಷ್ಟೇ ಕೆಲಸ ಇದ್ದರೂ ಅದರ ಮತ್ತೆ ಮಾಡ್ಲಕ್ಕೂ, ನಾಳೆ ಮಾಡ್ಲಕ್ಕೂ ಹೇಳಿ ಮುಂದೆ ಮುಂದೆ ಹಾಕಿಯಾದರೂ ಪುರುಸೊತ್ತು ಮಾಡಿ ಮಲ್ಲಿಗೆ ಕೊಯ್ದು ಕಟ್ಟಿ ಸೂಡದ್ದೆ ಇರಲೇ ಇರವು. ಆ ಸಮಯಲ್ಲಿ ಜೆಂಬರಂಗೋ ಇದ್ದರಂತೂ ಅವಕ್ಕೆ ಸ್ವರ್ಗಕ್ಕೆ ಮೂರೇ ಗೇಣು. ಎಂಗಳಲ್ಲಿದೇ ಮಂಗಳೂರು ಮಲ್ಲಿಗೆ, ಆ ಮಲ್ಲಿಗೆ, ಈ ಮಲ್ಲಿಗೆ ಹೇಳಿ ಸುಮಾರು ಬೇರೆ ಬೇರೆ ನಮೂನೆ ಮಲ್ಲಿಗೆ ಸೆಸಿಗೋ ಇದ್ದರೂ ಮಲ್ಲಿಗೆ ಹೂಗು ಧಾರಾಳ ಅಪ್ಪದು ಮಾತ್ರಾ ಮೇಲೆ ಹೇಳಿದಾಂಗೆ ಒಂದು ಬೇಸಗೆ ಮಳೆ ಬಿದ್ದ ಮೇಲೆಯೇ. ಆ ಒಂದು ಸುರೂಗಾಣ ಮಳೆ ಬಂದ ಸರೀ 22ನೆಯ ದಿನಂದ ಮಲ್ಲಿಗೆ ಹೂಗು ಅಪ್ಪಲೆ ಸುರುವಾವುತ್ತು. ಹಾಂಗೆ ಶುರುವಾದ ಮಲ್ಲಿಗೆ ಮತ್ತೆ ಒಂದು ವಾರದವರೆಗೆ ಕೊಯ್ದು, ಕಟ್ಟಿ ಪೂರೈಸದ್ದಷ್ಟು ಆವುತ್ತು. ಅಂಬಗ ನಿಂಗ ಎಲ್ಲೇ ನೋಡಿ ಎಲ್ಲೋರ ತಲೆತುಂಬಾ ಮಲ್ಲಿಗೆ ಹೂಗೇ. ಎಲ್ಲೆಲ್ಲಿಯೂ ಮಲ್ಲಿಗೆ ಹೂಗಿನ ಘಮ ಘಮವೇ. ಅಷ್ಟೇ ಅಲ್ಲದ್ದೇ ಸೂಡಿ ಒಳುದ್ದರ ಆವರವರ ಬೇಕಾದೋರಿಂಗೆ ಎಲ್ಲಾ ಕಟ್ಟಿ ತೆಕ್ಕೊಂಡು ಹೋಗಿ ಕೊಡುವ ಸಂಭ್ರಮವೂದೇ ನೋಡ್ಲೇ ಒಂದು ಚೆಂದ. ಪುಟ್ಟು ಪುಟ್ಟು ಕೂಸುಗಳೂ ತಲೆ ಕಸವು ಇಲ್ಲದ್ರೂ “ಎನಗೂ ಮದಿಮ್ಮಾಳ ಹಾಂಗೆ ಉದ್ದ ಮಾಲೆಯ ಜಲ್ಲಿಬಿಡೆಕ್ಕೂ” ಹೇಳಿ ಹಠ ಮಾಡುದು ನೋಡುವಗ ನಾವೂ ಸಣ್ಣಾದಿಪ್ಪಗ ಹಾಂಗೇ ಹಠ ಮಾಡಿದ್ದೂ ನೆಂಪಾಗಿ ಮತ್ತೆ ಮನಸ್ಸು ಬಾಲ್ಯಕ್ಕೆ ತಿರುಗಿ ಮೋರೆಲಿ ಒಂದು ಕಿರುನೆಗೆ ಮೂಡದ್ದೇ ಇರ. ಅಕ್ಕನೋ ತಂಗೆಯೋ ಹೂಗು ಸೂಡಿದ್ದರ ಕಂಡು ಅವರ ಪುಟ್ಟು ಅಣ್ಣನೋ, ತಮ್ಮನೋ ಇದ್ದರೆ ಅವು “ಎನಗೂ ಹೂಗು ಬೇಕು ಹೇಳಿ” ತರ್ಕ ಮಾಡಿ ಅಮ್ಮನ ಹತ್ತರೆ ಇಪ್ಪ ಮೂರು ತಲೆಕಸವಿಂಗೆ ಕ್ಲಿಪ್ ಹಾಕಿ ಸೂಡ್ಸಿಗೊಂಬ ಮುಗ್ಧತೆ ನೋಡ್ಲೆ ಎಷ್ಟು ಚೆಂದ ಅಲ್ಲದಾ?

ಇರುಳಿಂಗೆ ಚಿಮಿಣಿ ದೀಪವೇ ಗತಿ
ಶಾಲೆಂದ ಬಂದು ಬೇಗ ಉಂಡುಪುಸ್ತಕ ಬೇಗ ಮುಟ್ಟುತಡ ಮಾಡಿರೆ ಕಸ್ತಲಪ್ಪಗಇದ್ದು ಕರೆಂಟು ಕಟ್ಟು ಮತ್ತೆ ನವಗೆ ಓದ್ಲೆ ಬರವಲೆಗತಿಯೇ ಚಿಮಣಿ ದೀಪಸುತ್ತು ಬಂದು ನುಸಿಯೂ ಕಚ್ಚಿರೆಕೇಳಡ ಬಪ್ಪ ಕೋಪ ವಾರಕ್ಕೊಂದರಿ ಒಂದೊಂದು ರೀತಿಅವು ಮಾಡಿದ ಶಿಸ್ತುಮೊದಲೇ ಎಲ್ಲ ತೆಗದು ಮಡುಗುಲೆಹೇಳಿತ್ತದಕ್ಕೆ ತಥಾಸ್ತು ಹೇಂಗೇಳಿ ಹೇಳಿರೆ ಅರ್ಧಗಂಟೆಕೂಡ್ಸಿಯೇ ಲೆಕ್ಕಾಚಾರನವಗೆಲ್ಲ ಗೊಂತಿದ್ದ ವಿಷಯ ಆಗಿಸಮಸ್ಯೆಗೆ ಕೇಳುದು ಆರ? ಎಣ್ಣೆ ಸಿಕ್ಕದ್ದ ಸಮಯಕೆ ಬಂತುಕರೆಂಟಿನ ಚಾರ್ಜರು ಲೈಟುಎಣ್ಣೆಯ ಹೊಗೆಲಿ ಕೂಪಲೆಡಿಯದ್ದೆಹೇಳಿತ್ತು ನಾವದಕ್ಕೆ ರೈಟು

ಕನಸು ಮೇಲಾರ
1. ಕಾಲಿಂದ ಶೂ ಜಾರಿ ಬಿದ್ದ ಕಥೆ ಒಂದು ದೊಡ್ಡ ಬಸ್ಸಿಲಿ ಹೋಗಿ ಎಲ್ಲೋ ಒಂದು ಕಡೆಗೆ ಚಾರಣ ಹೋಗಿತ್ತಿದ್ದೆಯ°. ಚಾರಣ ಮುಗಿಶಿ ಒಂದು ಕಡೆ ಕೂದೆಯ°. ಎಲ್ಲೋರು ಬಂದು ಸೇರಿದ ಮೇಲೆ ಬಸ್ ಹತ್ತಿದೆಯ°. ಬಸ್ಸಿನ ಕಡೆಯ ಸೀಟು ಎನಗೆ. ಕೂಪಗ ನೋಡುತ್ತೆ, ಎನ್ನ ಒಂದು ಕಾಲಿಲಿ ಶೂ ಇಲ್ಲೆ. ಬಸ್ ಹತ್ತುವಾಗ ಜಾರಿ ಬಿದ್ದಿರೆಕ್ಕು ಗ್ರೇಶಿದೆ. ಅಷ್ಟಪಗ ಬಸ್ ಹೆರಟಿತ್ತು. ಅಯ್ಯೋ ನಿಲ್ಲಿಸಿ ಎನ್ನ ಶೂ ಹೇಳಿ ಜೋರಾಗಿ ಕೂಗಿ, ಚಾಲಕನ ಹತ್ತರೆ ಬಂದು ಬಸ್ ನಿಲ್ಲುಸುಲೆ ಕೇಳಿಕೊಂಡೆ. ಅಷ್ಟರಲ್ಲಿ ಬಸ್ ಸುಮಾರು ದೂರ ಬಂದಾಗಿತ್ತು. ಚಾಲಕ ಬಸ್ ನಿಲ್ಲುಸಿದ. ಆನು ಬಸ್ಸಿಳಿದು ಓಡುತ್ತ ಹೋದೆ. ಓಡಿದೆ… ಓಡಿದೆ. ಆದರೂ ಎಲ್ಲಿ ನಾವು ಬಸ್ ಹತ್ತಿದ್ದು ಹೇಳಿಯೇ ಗೊಂತಾಗದ್ದೆ ಕಂಗಾಲಾದೆ. ಕಸ್ತಲೆ ಕಟ್ಟಿ ಆ ಜಾಗೆಯೂ ಗೊಂತಾಗದ್ದೆ ಹೋತು. ಶೂ ಆಶೆ ಬಿಟ್ಟು ವಾಪಾಸು ಹೋಪದ ಹೇಳುವ ಅಯೋಮಯ. ಅಷ್ಟರಲ್ಲಿ ಈ ಎಲ್ಲ ಗೊಂದಲ ಕ್ಷಣಲ್ಲೇ ಮಾಯ ಆದ ಸುಂದರ ಘಳಿಗೆ ಎದುರಾತು! ಒಂದು ಶೂಗೋಸ್ಕರ ಎಷ್ಟು ದೂರ ಓಡೆಕ್ಕಾಗಿತ್ತೋ ಏನೋ! ಸದ್ಯ ಬಚಾವ್! ಓಡುದರ ತಪ್ಪಿಸಿದ ಉದಿಯಪ್ಪಗಕ್ಕೆ ಒಂದು ನಮಸ್ಕಾರ ! 2. ಪ್ಲಮ್ ಹಣ್ಣಿನ ಕಥೆ ಬಸ್ ಹತ್ತುಲೆ ತುಂಬ ಜನ ಇತ್ತವು. ಈಗ ಶಕ್ತಿ ಯೋಜನೆಂದ ಹೆಮ್ಮಕ್ಕೊಗೆ ಹೆಚ್ಚು ಶಕ್ತಿ ಬಯಿಂದು. ಆ ಶಕ್ತಿಂದ ಹಾಂಗೂ ಹೀಂಗೂ ಹೋರಾಡಿ ಬಸ್ ಹತ್ತಲೂ ಈಗ ಕಲ್ತಿದೆ. ಕೂಪಲೆ ಹಿಂದೆ ಸೀಟುದೇ ಸಿಕ್ಕಿತ್ತು. ಚೀಲ ಮಡುಗಿ, ಸೀಟು ಖಾತ್ರಿ ಪಡಿಸಿಕೊಂಡು, ಮೂತ್ರ ಮಾಡ್ಲೆ ಹೋಪಲೆ ಕೆಳ ಇಳುದೆ. ಮೂತ್ರಾಲಯ ರಜ ದೂರ ಇತ್ತು. ಹೋಪ ದಾರಿಲಿ ಅಲ್ಲೇ ಮುಂದೆ ಒಬ್ಬ ಪ್ಲಮ್ ಹಣ್ಣು ಮಾರಿಗೊಂಡಿತ್ತ°. ಕಿಲೋಗೆ ಎಷ್ಟು ಕೇಳಿದೆ. ರೂ. 270 ಹೇಳಿದ. ಹಣ್ಣು ಭಾರೀ ಲಾಯಕ ಇತ್ತು. ತೆಕ್ಕೊಂಬ ಹೇಳಿರೆ ಆವಾಗ ಕೈಲಿ ಪೈಸೆ ಇತ್ತಿಲ್ಲೆ. ಎನ್ನೊಟ್ಟಿಂಗೆ ಇದ್ದ ಗೆಳತಿಯರ ಹತ್ರವೂ ಇತ್ತಿಲ್ಲೆ. ಮೂತ್ರ ಮಾಡಿ ಬಂದು ಬಸ್ ಹತ್ತಿ ಪೈಸೆ ತೆಕ್ಕೊಂಡು ಕೆಳ ಇಳುದು ಹಣ್ಣು ಇಪ್ಪ ಜಾಗಗೆ ಹೋದರೆ ಅವ ಎಲ್ಲಿದ್ದ? ಹಣ್ಣು ಎಲ್ಲ ಮಾರಾಟ ಮಾಡಿ ಅಲ್ಲಿಂದ ಹೋಗಿ ಆಗಿತ್ತು. ನಿರಾಶೆಂದ ಬಂದು ಬಸ್ ಹತ್ತಿ ಕೂರೆಕ್ಕೋಳಿ ಗ್ರೇಶುವಷ್ಟರಲ್ಲಿ ಎಚ್ಚರ ಆಗಿತ್ತು! ಉದಿಯಪ್ಪಗ ಗಂಟೆ ಆರೂವರೆ ತೋರಿಸಿತ್ತು. ಹಣ್ಣು ಸಿಕ್ಕದ್ದ ನಿರಾಶೆಲಿಯೇ ಹಾಸಿಗೆಂದ ಎದ್ದೆ! (ಚಿತ್ರ: ಸಾಂದರ್ಭಿಕ ಎಐ ಚಿತ್ರಂಗೊ)

ಕಲ್ಪಣೆತೋಟದ ಪರಮೇಶ್ವರ ಭಾವಯ್ಯನ ತಲೆಬೇನೆ
ಕಲ್ಪಣೆತೋಟದ ಪರಮೇಶ್ವರ ಭಾವಯ್ಯಂಗೆ ಅಣ್ಣತಮ್ಮಂದ್ರೊಟ್ಟಿಂಗೆ ಪಾಲುಪಟ್ಟಿ ಅಪ್ಪಗ ಸಿಕ್ಕಿದ ಜಾಗೆ ಇಪ್ಪದು ಮಲೆಯಾಳಿಗಳ ಜನಸಂಖ್ಯೆ ಹನಿಯ ಇಪ್ಪ ಕುತ್ತಿಕ್ಕೋಲಿಲ್ಲಿ. ಐವತ್ತು ಖಂಡಿ ಅಡಕ್ಕೆ ಅಪ್ಪ ತೋಟ, ಖರ್ಚಿಗೆ ಆಗಿ ಎಣ್ಣಗೂ ಆಗಿ ಮಾರಾಟಕ್ಕೆ ಇಪ್ಪತ್ತೈದು ಸಾವಿರ ಸಿಕ್ಕುವ ತೆಂಗಿನಕಾಯಿ, ಮಾಂತ್ರ ಅಲ್ಲ, ನಾಕೈದು ಕಿಂಟಲು ಗೆಣಮೆಣಸಿನ ಹುಟ್ಟುವಳಿಯೂ ಇದ್ದು. ತೋಟದ ಕರೆಲಿ ಇಪ್ಪ ಕುಮ್ಕಿಲಿ ನೆಟ್ಟ ಬೀಜದ ಮರಂಗಳಲ್ಲಿ ಒಂದಿಪ್ಪತ್ತೈದು ಗೋಣಿ ಬೀಜವೂ ಆವುತ್ತು. ಪೇಟಗೆ, ಅನುಪತ್ಯಕ್ಕೆ ಹೋಪಲೆ ಒಂದು ಲೆಫ್ಟ್ ಹೇಂಡ್ ಡ್ರೈವ್ ವಿಲ್ಲಿಸ್ ಜೀಪುದೆ ಅವನ್ಹತ್ತರೆ ಇದ್ದು! ಇಷ್ಟೆಲ್ಲ ಇಪ್ಪಗ ಕೆಲಸಕ್ಕೆ ಜೆನವೂ ಬೇಕನ್ನೆ! ನಾಕು ಒಕ್ಕಲುಗೊ ಕಾಯಮ್ಮಿಂಗೆ, ಮತ್ತೆ ಕೆಲವು ಅಗತ್ಯಕ್ಕೆ. ಆಳುಗೊ ಕಂಡುಕಟ್ಟುತ್ತವು ಹೇದು ತೋಟದ ಕೆಲಸಲ್ಲಿ ಆಳುಗಳ ಸಮಸಮ ಕೆಲಸ ಮಾಡುಗು ನಮ್ಮ ಭಾವಯ್ಯ. ಒಂದು ದಿನ ತೋಟಂದ ಬೆಳದ ಬಾಳೆಗೊನೆಗಳ ಕಡ್ದು ಜೀಪಿಂಗೆ ತುಂಬುಸಿ ಅಪ್ಪಗ ಮೂರುಸಂಧಿ ಆತು, ಭಾವಯ್ಯಂಗೆ ಕಂಡಾವಟ್ಟೆ ಬಚ್ಚಿ ಏನೆಡಿಯ. ಕೊನೆಗಳ ನೆಗ್ಗಿ ನೆಗ್ಗಿ ಮೆಯ್ಕೈ ಹಸಿ ಹುಣ್ಣಿನ ಹಾಂಗೆ ಸೆಳಿತ್ತು. ಮಲೆಯಾಳಿ ಕುಂಞಿರಾಮ ಅವನ ತೋಟಲ್ಲಿ ಕೆಲಸ ಮಾಡುವ ಆಳುಗಳ ಪೈಕಿ ರಜಾ ಎರಟಿ ಬೆಳವಿನದ್ದು. ಅದರ ಹತ್ತರೆ ಭಾವಯ್ಯ ಬೇನೆ ವಿಷಯ ಹೇದಪ್ಪಗ ‘ನಿಂಙೊ ಪೇಡಿಕ್ಕೇಂಡ ಸಾಮಿ, ಞಾನ್ ಒರು ಕುಪ್ಪಿ ಮರುನ್ನು ಕೊಡುಕ್ಕ, ನಿಂಙೊ ಕುಡಿಚ್ಚು ಒರಂಙಿಯಾಲಿ ಮದಿ’ ಹೇಳಿತ್ತದು. ಹಾಂಗೆ ಅದು ಮನಗೆ ಹೋಗಿ ಒಂದು ಕುಪ್ಪಿ ಮದ್ದುದೆ ತಂದು ಕೊಟ್ಟತ್ತು. ಎಂತದೋ ಘಾಟು..ಮದ್ದನ್ನೆ ಹೇದು ಇವ ಅದರ ಗಟಗಟನೆ ಕುಡುದು ಮನುಗಿದ. ಎಂಥಾ ಒರಕ್ಕು ಹೇದರೆ ಬಡುದು ಹಾಕಿದ ಹಾಂಗಿದ್ದ ಒರಕ್ಕು. ಕುಂಞಿರಾಮನ ಮದ್ದು ಕುಡ್ದಕ್ಕೋ ಎಂತದೋ.. ಮರದಿನ ಭಾವಯ್ಯಂಗೆ ಬಚ್ಚಲೂ ಇಲ್ಲೆ ಗಿಚ್ಚಲೂ ಇಲ್ಲೆ. ಮತ್ತೆ ಯಥಾಪ್ರಕಾರ ತೋಟಲ್ಲಿ ಆಳುಗಳ ಒಟ್ಟಿಂಗೆ ಕೆಲಸ. ಕಸ್ತಲಪ್ಪಗ ಕುಂಞಿರಾಮನ ಮದ್ದು ನೆಂಪಾತು! ಅದರ ದೆನಿಗೋಳಿ ನಿನ್ನ ಮದ್ದು ಫಶ್ಟಿತ್ತಿದ್ದು, ಇಂದಿಂಗೆ ಹನಿಯ ಇಕ್ಕೋ ಹೇದು ಕೇಳಿದ. ಕುಂಞಿರಾಮಂಗೆ ಸಾಮಿ ಎಂಗಳ ದಾರಿಗೆ ಬಂದವು ಹೇದು ಗೊಂತಾತು. ಮನಸ್ಸಿನ ಒಳಾಂದ ಮಾಂತ್ರ ನೆಗೆ ಮಾಡಿತ್ತು! ಹೀಂಗೆ ಕಾಲ ಕಳುದತ್ತು. ಆ ಮದ್ದಿನ ಬೀಜದ ಹಣ್ಣಿಂದ ಮಾಡ್ತವು ಹೇದು ಭಾವಯ್ಯಂಗೆ ಗೊಂತಾತು. ಅದರ ಪರಿಮ್ಮಳ ಹೆರ ಬಡಿಯದ್ದ ಹಾಂಗೆ ಭಾವಯ್ಯ ಈಗ ಎಲೆಗೆ ಪರಿಮ್ಮಳದ ಸುಣ್ಣ ಉದ್ದಿ ತಿಂಬದು! ಹೀಂಗೆ ಈ ಮದ್ದಿನ ಅಭ್ಯಾಸ ಆದ್ದು ಎಲ್ಲಿ ವರೆಗೆ ಹೋತು ಹೇದರೆ ಈಗೀಗ ಭಾವಯ್ಯಂಗೆ ಕುಪ್ಪಿ ಕುತ್ತ ಮಾಡದ್ದರೆ ಒರಕ್ಕೇ ಹತ್ತರೆ ಅಣೆಯ ಹೇಳುವಲ್ಲಿಗೆ ಎತ್ತಿದ್ದು. ಇದಕ್ಕೆ ವಿದ್ಡ್ರಾವಲ್ ಸಿಂಡ್ರೋಮ್ ಹೇಳುತ್ತವು, ನಿಂಗೊಗೆ ಈ ಸಮಸ್ಯಗೆ ಟ್ರೀಟ್ಮೆಂಟ್ ಬೇಕು ಹೇದು ಗವರ್ಮೆಂಟು ಆಸ್ಪತ್ರೆಯ ಪಲ್ಪನಾಭ ಡಾಕ್ಟ್ರು ಹೇದರೂ ನಮ್ಮ ಭಾವಯ್ಯ ಅದಕ್ಕೆಲ್ಲ ಗುಮಾನ ಮಾಡುವ ಜೆನವೇ ಅಲ್ಲ! ಹೀಂಗಿಪ್ಪಗ ಭಾವಯ್ಯನ ಅಕ್ಕನ ಮನೆಲಿ ಒಂದು ತ್ರಿಕಾಲಪೂಜೆ ನಿಘಂಟಾತು. ಅಕ್ಕನ ಮನಗೆ ಹೋಗದ್ದರಕ್ಕೋ! ಅಂದು ಹಗಲಿಡೀ ಕಾಸ್ರೋಡಿನ ಕೋರ್ಟಿಲ್ಲಿ ಹಳೆ ನಂಬ್ರದ ಕ್ರೋಸ್ ಇತ್ತಿದ್ದ ಕಾರಣ ಇರುಳಿಂಗೆ ಸೀತಾ ಅಕ್ಕನ ಮನಗೇ ಬಂದ. ಇವ ಅಲ್ಲಿಗೆ ಎತ್ತುವಾಗ ಕಿಳಿಂಗಾರು ಭಟ್ರು ಗಣಾನಾಂತ್ವಾ ಸುರು ಮಾಡಿ ಆಯಿದು. ಬೆಶಿನೀರ ಕೊಟ್ಟಗೆಲೆ ಕೊದುಕ್ಕೊಂಡಿತ್ತಿದ್ದ ನೀರಿನ ಒಣೆಕ್ಕರಟಲ್ಲಿ ಬಾಲ್ದಿಗೆರದು ಹಾಳಿತ ಮಾಡಿ ಮಿಂದಿಕ್ಕಿ ಬಂದ ಭಾವಯ್ಯ ಗುರಿಕ್ಕಾರ್ರ ಹತ್ತರೆ ಅಡಕ್ಕೆ ರೇಟಿನ ವಿಮರ್ಶಗೆ ಕೂದ. ಅಷ್ಟಾವಧಾನ ಇತ್ತಿದ್ದ ಕಾರಣ ಮಂಗಳಾರತಿ ಮುಂದೆ ಹೋತು, ಪೂಜೆ ಮುಗಿವಾಗ ಗಂಟೆ ಹತ್ತಾತು. ಜವ್ವನಿಗರ ಮಿಂಚಿನ ಸುದರಿಕೆಂದಾಗಿ ಬೇಗ ಬೇಗ ಊಟವೂ ಮುಗುದತ್ತು. ಅಷ್ಟಪ್ಪಗ ಗುರಿಕ್ಕಾರ್ರ ನೆರೆಕರೆಯ, ಓಣೀಸು ಮಾಷ್ಟ್ರು ಹೇದೇ ಹೆಸರುವಾಸಿ ಆದ ಎಂಕಪ್ಪಣ್ಣ ಇಂದು ಇಸ್ಪೇಟಾಟ ಇಲ್ಲಿಯೋ ಅಂಬಗ ಹೇದು ಕೇಳಿದವು. ಮತ್ತೆಂತಕೆ ತಡವು! ಓಣೀಸು, ಒಕ್ಕೈ ಆಡುವ ಉಮೇದಿನವು ಸುತ್ತು ಕೂದವು. ಕತ್ತೆ ಆಟ ಆಡುವ ಮಕ್ಕೊ ಹಳೆ ಪಿಡಿ ಇದ್ದೋ ಹೇದು ಹುಡುಕ್ಕಿದವು. ಅಕೇರಿಯಾಣ ಹಂತಿಲಿ ಕೂದ ಕಾರ್ಯಸ್ಥ ದಾಮೋದರನೂ ಓಣೀಸಿಂಗೆ ಕೂದತ್ತು. ಪಿಡಿ ಕವುಂಚಿ ಮಡುಗುವದು, ಕಡಿವದು, ತೇಚ್ಚಿ ಬಿಡುವದು ಹೇಳಿಯೊಂಡು ಆಟ ರೈಸಲೆ ಸುರುವಾತು. ಭಾವಯ್ಯಂಗೋ.. ಇಸ್ಪೇಟ್ ಆಟ ಅರಡಿಯ. ಹಾಂಗಾಗಿ ಜೆಗ್ಲಿಯ ಒಂದು ಹೊಡೆಲಿ ಅವಂಗೆ ಹಾಸಿ ಕೊಟ್ಟಾಯಿದು, ಅವ ಮನುಗಿಯೂ ಆಯಿದು. ಒಂದು ಹೊಡೆಲಿ ಓಣೀಸ್ ಒಂದು, ಎರಡು, ಮೂರು ಹೇದು ಗೌಜಿ. ಇನ್ನೊಂದು ಹೊಡೆಲಿ ಕೆಡಕ್ಕೆಲಿ ಮನುಗಿರೂ ಭಾವಯ್ಯಂಗೆ ಒರಕ್ಕು ಸರ್ವಥಾ ಬಾರ. ರಜ ಹೊತ್ತಪ್ಪದ್ದು ತಲೆಯೂ ಸೆಳಿವಲೆ ಸುರುವಾತು. ಕಣ್ಣಿನೆದುರು ನಕ್ಷತ್ರ ಕಾಂಬ ಹಾಂಗೆ ಅಪ್ಪಲೆ ಸುರುವಾತು. ಚೀಲವ ಪರಡಿ ನೋಡಿದ, ಕುಪ್ಪಿ ಮದ್ದಿದ್ದೋ ಹೇದು. ಇಲ್ಲೆ.. ಕೋರ್ಟಿಂಗೆ ಹೋಪಲಿದ್ದ ಕಾರಣ ಕುಪ್ಪಿಯ ಬಿಟ್ಟಿಕ್ಕಿ ಬಂದದು ನೆಂಪಾತು. ಅಯ್ಯನ ಮಂಡೆ! ಎಂತ ಮಾಡುವದು! ಶೇಣಿಯ ಕರ್ಣನ ‘ಏನು ಮಾಡುವದಿನ್ನು, ದೈವವಿಹೀನನಲಾ ನೃಪತಿ’ ನೆಂಪಾತವಂಗೆ. ಅತ್ಲಾಗೊಂದಾರಿ, ಇತ್ಲಾಗೊಂದಾರಿ ಭಾವಯ್ಯನ ಹೊಡಚ್ಚಾಟ ಸುರುವಾತು. ಇನ್ನು ಹೀಂಗೆ ಕೂದರೆ ಕತೆ ಕೈಲಾಸ ಅಕ್ಕು ಹೇದು ಭಾವಯ್ಯಂಗೆ ಗೊಂತಾತು. ಮೆಲ್ಲಂಗೆ ಎದ್ದು ಹೋಗಿ ಅವನ ಭಾವನ ಹತ್ತರೆ ಇಲ್ಲೆಲ್ಲಿಯಾರೂ ಈಗ ಕುಪ್ಪಿಮದ್ದು ಸಿಕ್ಕುಗೊ ಭಾವ ಹೇದು ಕೆಮಿಲಿ ಉರುಗಿದ. ಭಾವಯ್ಯನ ಅವತಾರ ನೋಡಿದ ಅವನ ಭಾವ ಕಾರ್ಯಸ್ಥ ದಾಮೋದರನ ದುನಿಗೋದು ಹತ್ತರೆ ಎಲ್ಲಿಯಾರೂ ಕುಪ್ಪಿ ಸಿಕ್ಕುಗೋ ಹೇದು ಕೇಳಿದ. ಅದು ಕ್ಷಣಲ್ಲಿ ಅದರ ಮನಗೆ ಹೋಗಿ ಬೀಜದ ಹಣ್ಣಿನ ಹೊಸ ಮದ್ದು ತಂದು ಕೊಟ್ಟತ್ತು. ಅದರ ಕುಡುದ ಭಾವಯ್ಯ

ತೆಳ್ಳೇವು ಸವಿಯ ಬಲ್ಲವನೇ ಬಲ್ಲ
ಈ ವೆಬ್ಸೈಟ್ ನಲ್ಲಿ ಹವ್ಯಕ ಭಾಷೆಲಿ ಲೇಖನ ಬರಿಲಕ್ಕು ಹೇಳಿ ಗೊತ್ತಾದಾಗಿಂದನೂವಾ ಎಂತ್ರ ಬಗ್ಗೆ ಬರೀಲಿಕ್ಕು ಹೇಳಿ ಯೋಚ್ನೆ ಮಾಡ್ತಾ ಇದ್ದಿದ್ದಿ. ಇವತ್ ಬೆಳ್ ಬೆಳ್ಗೆ ತೆಳ್ಳೇವ್ ಬಾಯ್ಲಿಟ್ಟಾಗ “ಅರೆ, ಎಂಥ ರುಚಿ, ಇದ್ರ ಬಗ್ಗೇ ಎಂತಕ್ ಬರೀಲಾಗ?” ಹೇಳ ವಿಚಾರ ಬಂತು. ನಮ್ ಉತ್ತರ ಕನ್ನಡದ ಅದ್ರಲ್ಲೂ ಸಿರ್ಸಿ, ಯಲ್ಲಾಪುರದವ್ಕೆ ಈ ತೆಳ್ಳೇವು ಅಂದ್ರೆ ಆಗೋತು. ಹೆಚ್ಚುಕಮ್ಮಿ ಪ್ರತಿದಿನ ತಿಂದ್ರೂ ಇದ್ರ ಮೇಲಿಪ್ಪ ಆಕರ್ಷಣೆ, ರುಚಿ ಕಡ್ಮೆ ಆಗ್ತಿಲ್ಲೆ. ಅದ್ಕೇ, ತೆಳ್ಳೇವೇ ಸರ್ಯಾದ ವಿಷ್ಯ ಹೇಳಿ ಬರ್ಯಲೆ ಶುರು ಮಾಡ್ದಿ. ಸುಮಾರು ಎಲ್ಲರ ಮನೆಲ್ಲುವಾ ಸೂರ್ಯ ಹುಟ್ಟ ಸಮಯಕ್ಕೆ ಇವತ್ ತಿಂಡಿಗೆ ಎಂತಾ ಮಾಡದು? ಹೇಳ ಪ್ರಶ್ನೆ ಹುಟ್ಕಂಡಿರ್ತು. ಆದ್ರೆ ನಮ್ಮನೆ ಅಮ್ಮ ಹಂಗ್ಯಾವತ್ತೂ ವಿಚಾರನೇ ಮಾಡಿದ್ದಿಲ್ಲೆ ಅಂದ್ಕತ್ತಿ. ಎಂತಕ್ಕೆ ಅಂದ್ರೆ ನಮ್ಮನೆನೂ ಸೇರ್ಸಿ ಬಹುತೇಕ ಉತ್ತರ ಕನ್ನಡದ ಹವ್ಯಕರ ಮನೇಲಿ ಬೆಳಗಿನ ಆಸ್ರಿ ತೆಳ್ಳೇವೇ ಆಗಿರ್ತು ಹೇಳದು ನಮ್ಗೆಲ್ಲರಿಗೂ ಗೊತ್ತಿಪ್ಪ ವಿಷ್ಯನೆಯಾ.. ಪ್ರತಿದಿನ ಬೆಳ್ಗೆ ತೆಳ್ಳೇವ್ ಮಾಡ್ತ ಹೇಳಿ, ಇದ್ರ ಮಾಡುದು ಸಸಾರ ಅಂದ್ಕಳಡಿ ಮತ್ತೆ. ಸೋಷಿಯಲ್ ಮೀಡಿಯಾದಲ್ಲಿ ತೋರಿಸ್ವಾಂಗ್ ಹತ್ ನಿಮಿಷ, ಹದ್ನೈದ್ ನಿಮಿಷಕ್ಕೆ ರೆಡಿಯಾಪ್ಪು ತಿಂಡಿಯಂತೂ ಅಲ್ದೇ ಅಲ್ಲ. ಇದ್ರ ಹಿಟ್ ಮಾಡಕರೆ ಅಕ್ಕಿ ಜತಿಗೆ ಸ್ವಲ್ಪ ಉದ್ದು, ಮೆಂತೆ ಹಾಕಿ ಮುಂಚಿನ ದಿನನೇ ಬೆಳ್ಗೆ ನೆನ್ಸಿಡವು. ಸಂಜೆ ಹೊತ್ತಿಗೆ ಅವಲಕ್ಕಿ, ಉಪ್ಪು ಹಾಕಿ ತೆಳುವಾಗಿ ಬೀಸ. ತೆಳ್ಳೇವು ಚೋಲೋ ಆಗವು ಹೇಳಿ ಸೌತೇಕಾಯಿ ಅಥ್ವಾ ಮಗೆಕಾಯಿ ಒಂದೊಂದ್ ಸಲ ಬಾಳೆಹಣ್ಣು ಹಾಕಿ ಬೀಸದು ಇದ್ದು. ತೆಳ್ಳೇವನ್ನ ಮಾಡದು ಅಥ್ವಾ ಎರೆಯದು ಒಂದು ಕಲೆ ಹೇಳಿ ಹೇಳ್ಲಕ್ಕು. ಹಿಟ್ಟಿನ ಹದ ಸರ್ಯಾಗವು ಹೇಳದ್ರ ಸಂತಿಗೆ ಬಂಡಿನ ಹದಕ್ ತಂದ್ಕಂಬದೂ ಅಷ್ಟೇ ಮುಖ್ಯ. ದೋಸೆ ಎರ್ಯಕಿಂತ ಮೊದ್ಲು ಬಂಡಿಗೆ ಸ್ವಲ್ಪ ಎಣ್ಣೆ ಹಚ್ಕಳವು. ಮತ್ತೆ ಇದ್ನ ಎರ್ಯಕರೆ ಒಂದೇ ಸಮನಾಗಿ ಎರ್ಯವು. ತೆಳ್ಳೇವನ್ನ ಮಾಡಕರೆ ಬೆಂಕಿ ಜಾಸ್ತಿಯಾಗಿ ಬಂಡಿ ಗಾರ್ ಎದ್ರೆ, ತೆಳ್ಳೇವು ಕತ್ ಹೋಗ್ತು. ಅಥ್ವಾ ಬೆಂಕಿ ಸಣ್ ಇದ್ರೆ ತೆಳ್ಳೇವು ಏಳ್ತೇ ಇಲ್ಲೆ. ಹಂಗಾಗಿ ಬೆಂಕಿನ ಸಣ್ಣ, ದೊಡ್ಡ ಮಾಡ್ಕೋತ ಬಂಡಿನ ಹದದಲ್ಲಿ ಇಟ್ಕಂಡು ಎರ್ಯವು. ಬಂಡಿಗೆ ಎಣ್ಣೆ ಹಚ್ಚಿ ತಿಕ್ಕಲೆ ಚುಟ್ಟಿನ ಬಳಸ್ತ. ಚುಟ್ಟಿನ ಎರಡು ರೀತಿಲಿ ಮಾಡ್ಲಕ್ಕು. ಒಂದು ಹಾಲ್ಗುಂಬಳ ಕಾಯಿ ತೊಟ್ಟಿಂದ ಅಥ್ವಾ ಬಾಳೆ ಎಲೆ ಮಡಚಿ ಮಾಡ್ತ. ತೆಳ್ಳೇವ್ನ ಎರೆಯಲೆ ಮೊದ್ಲೆಲ್ಲ ಬಾಳೆ ಎಲೆನ ಬಳಸ್ತಿದ್ದ. ಆದರೆ ಈಗೀಗ ಕೆಲ್ವು ಬದಿಗೆ ಇಸ್ಪೀಟ್ ಎಲೆ, ಪಿವಿಸಿ ಪೈಪ್ನ ತುಂಡು, ವಾಯ್ದೆ ಮುಗ್ದ ಎಟಿಎಂ ಕಾರ್ಡು ಎಲಾ ಬಳ್ಸ್ತಾ ಇದ್ದ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಕೆಟ್ ಹಾಳು. ಇದರಿಂದ ಗೊತ್ತಿಲ್ದೆನೆಯಾ ನಮ್ ದೇಹದೊಳಗೆ ಮೈಕ್ರೋ ಪ್ಲಾಸ್ಟಿಕ್ನ ಕಣಗಳು ಹೋಗ್ತಾ ಇದ್ದು. ಹಂಗಾಗಿ ಮೊದ್ಲಿನವು ಹಾಕ್ಕೊಟ್ಟ ಬಾಳೆ ಎಲೆಲಿ ದೋಸೆ ಎರ್ಯ ಪದ್ಧತಿಲ್ಲೇ ಮಾಡವು. ತೆಳ್ಳೇವು ಹೆಸರೇ ಹೇಳಹಂಗೆ ರಾಶೀ ತೆಳ್ಳಗೆ ಇರ್ತು. ಕಾಗದದಷ್ಟೇ ತೆಳುವ ಹೇಳಿ ಹೇಳ್ಳಕ್ಕು. ಅದ್ ಅಷ್ಟು ತೆಳ್ಗಿಪ್ಪದಕ್ಕೆ, ಮತ್ತೆ ಅದ್ಭುತ ರುಚಿ ಇಪ್ಪದಕ್ಕೆ ಹೊಟ್ಟೆಗ್ ಎಷ್ಟ್ ಇಳತ್ತು ಹೇಳದು ಗೊತ್ತೇ ಆಗ್ತಿಲ್ಲೆ. ಹೆಚ್ಗೆ ತಿಂದ್ ಹೋಪುಲ್ ಇನ್ನೂ ಒಂದ್ ಕಾರ್ಣ ಇದ್ದು. ಎಂತದು ಅಂದ್ರೆ ಅದ್ಕೆ ಹಚ್ಕಂಬ ಪದಾರ್ಥ. ಬೆಲ್ಲ ತುಪ್ಪ, ಎಣ್ಣೆ ಉಪ್ಪಿನಕಾಯಿ, ಖಾರದ ಪುಡಿ ಎಣ್ಣೆ, ಬಾಳೆಹಣ್ ರಸಾಯನ, ಬೇರೆ ಬೇರೆ ನಮ್ನಿ ಚಟ್ನಿ ಎಂಥ ಹಚ್ಕಂಡ್ರೂ ಇದ್ರ ರುಚಿ ದುಪ್ಪಟ್ಟಾಗ್ತಾನೇ ಹೋಗ್ತು. ಮತೆ, ಇದ್ರ ಜತಿಗೆ ನಮ್ನಮ್ನಿಯ ಪಲ್ಯ ಬಾಜಿಯನ್ನ ನಾವು ಹಚ್ಕ ತಿಂದಾಕ್ತು. ಇನ್ನೂ ಒಂದು ಅಂದ್ರೆ ಈ ಸೀಸನ್ ಅಲ್ಲಿ ಫೇಮಸ್ ಆಗಿಪ್ಪ ಮಾಯ್ನಣ್ರಸಾಯ್ನ ಮತ್ ತೆಳ್ಳೇವು ಒಂದೊಳ್ಳೆ ಕಾಂಬಿನೇಷನ್ನು. ಸಂಜಿ ಕಡಿಗೆ ʼಸ್ನಾಕ್ಸ್’ ಆಗುವಾ ಸುಮಾರ್ ಜನ ಮದ್ದೆಮೇಲೆ, ಮೂರ್ಸಂಜಿಗೆ ತೆಳ್ಳೆವನ್ನ ಎರ್ಕಂಡು ತಿಂತ.ಯಲ್ಲಾಪುರ, ಸಿರ್ಸಿ, ಸಿದ್ಧಾಪುರದ ಬದಿಯವ್ಕೆ ತೆಳ್ಳೇವು ಒಂದ್ ಸಹಜ ತಿಂಡಿ ಅನ್ಸಿರುವ ಬೇರೆಯವ್ಕೆ ಇದು ವಿಶೇಷ ತಿಂಡಿನೆಯ. ಬೇರೆ ಬದಿಯಿಂದ ಬಪ್ಪ ನೆಂಟ್ರು ತೆಳ್ಳೇವ್ನ ರುಚಿಯಾದ, ವಿಶೇಷ ತಿಂಡಿ ಹೇಳೇ ಟ್ರೀಟ್ ಮಾಡ್ತ. ಅದರ ಸಪೂರ, ರುಚಿ, ಎರೆಯುವ ರೀತಿ ನೋಡಿನೇ ಸಿಕ್ಕಾಪಟ್ಟೆ ಆಶ್ಚರ್ಯ ಮಾಡ್ಕತ್ತ. ಅದೆಷ್ಟೋ ವರ್ಷದಿಂದ ರುಚಿ ರುಚಿಯಾದ ತೆಳ್ಳೇವು ನಮ್ಮ ದಿನಚರಿಯ ಭಾಗವಾಗಿ ನಂಗ್ಳ ಜತಿಗೆ ಬತ್ತಾ ಇದ್ದು. ತೆಳ್ಳೇವು ಹೇಳ ವೊಳ್ಳೆ, ಆರೋಗ್ಯಕರ ಆಹಾರ ಪರಂಪರೆ ಹೀಗೇ ಶತಶತಮಾನ ಮುಂದ್ವರಿಲಿ!
ಹವ್ಯಕ ವಿಶ್ವ :
ಹವ್ಯಕ ಭಾಷೆಗಾಗಿ, ಹವ್ಯಕ ಸಮಾಜಕ್ಕಾಗಿ
ಹವ್ಯಕ ವಿಶ್ವ- ಹವ್ಯಕ ಭಾಷೆಗಾಗಿ, ಹವ್ಯಕ ಸಮಾಜ, ಹವ್ಯಕ ಬಂಧುಗೊಕ್ಕಾಗಿ ಹವ್ಯಕರೇ ರೂಪಿಸಿದ ವೆಬ್ತಾಣ. ಹವ್ಯಕರ ಜಾಲ ಬಿಡಾರ ಹೇಳಿ ಹೇಳ್ಳಕ್ಕು. ಹವ್ಯಕ ಭಾಷಾ ಸಾಹಿತ್ಯದ ಬಗ್ಗೆ ತುಡಿತ ಇಪ್ಪಂತಹ ಸಮಾನ ಮನಸ್ಕರ ಹಲವು ವರ್ಷಗಳ ಕನಸು ಇದು. ಅದೀಗ ನನಸಾವುತ್ತಾ ಇದ್ದು. ಬಲು ವಿಶಿಷ್ಟ ಆಗಿಪ್ಪ ಹವಿಗನ್ನಡ ಭಾಷೆಲಿ ಸಾಹಿತ್ಯ ಕೃಷಿ ಮಾಡುವ, ಆಸಕ್ತ ವಿಷಯಂಗಳ ಬಗ್ಗೆ ಅಕ್ಷರ ರೂಪಕ್ಕೆ ಇಳುಶುವ ಬರಹಗಾರರ, ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿ ಸಮಾಜದ ಹೆಮ್ಮೆ ಆಗಿಪ್ಪಂತಹ ಜನರ ಪರಿಚಯ ಮಾಡುವ, ಅದರೊಟ್ಟಿಂಗೆ ಎಲೆಮರೆ ಕಾಯಿಯ ಹಾಂಗಿಪ್ಪ ಸಮಾಜದ ಪ್ರತಿಭೆಗಳ ಬಗ್ಗೆ ಜಗತ್ತಿಂಗೆ ತಿಳುಶುವ ವೇದಿಕೆ ಇದು. ಹವ್ಯಕ ಸಮಾಜದ ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ, ಆಹಾರ ಕ್ರಮ, ಜೀವನ ಶೈಲಿ, ಕೃಷಿಯ ಬಗ್ಗೆ ಹೊಸ ತಲೆಮಾರಿಂಗೆ ತಿಳಿಸುವ ವೇದಿಕೆಯೂ ಅಪ್ಪು. ಹವ್ಯಕರಿಂಗೆ ಸಂಬಂಧಪಟ್ಟ ಎಲ್ಲ ವಿಷಯಂಗಳೂ ಈ ತಾಣಲ್ಲಿ ಸಿಕ್ಕುತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಆಸುಪಾಸಿಲ್ಲಿ ಚಾಲ್ತಿಲಿಪ್ಪ ಹವಿಗನ್ನಡ ಅಥವಾ ಉತ್ತರ ಕನ್ನಡದ ಸುತ್ತಮುತ್ತ ಮಾತಾಡುವ ಹವಿಗನ್ನಡಕ್ಕೆ ಮಾತ್ರ ಹವ್ಯಕ ವಿಶ್ವ ಸೀಮಿತ ಅಲ್ಲ. ಈ ಎರಡು ಭಾಷೆಗೊಕ್ಕೂ ಇಲ್ಲಿ ಅವಕಾಶ ಇದ್ದು. ಈ ಎರಡೂ ಪ್ರದೇಶಲ್ಲಿಪ್ಪ ಹವ್ಯಕರಲ್ಲದ್ದೆ, ವಿವಿಧ ದೇಶ, ರಾಜ್ಯಂಗಳಲ್ಲಿ ನೆಲೆಕಂಡುಕೊಂಡಿಪ್ಪ ಎಲ್ಲ ಹವ್ಯಕರನ್ನು ತಲುಪುವ ಪ್ರಯತ್ನವೂ ಅಪ್ಪು. ಈ ಜಾಲ ಬಿಡಾರಕ್ಕೆ ಆರು ಬೇಕಾದರೂ ಬರವಲಕ್ಕು. ಒಂದೇ ಒಂದು ನಿರೀಕ್ಷೆ. ಎಂತ ಹೇಳಿರೆ, ಬರಹಂಗೊ ಎಲ್ಲವೂ ಹವ್ಯಕ ಭಾಷೆಲಿ ಇರೆಕು. ಮಾಹಿತಿ ಪೂರ್ಣವಾಗಿರೆಕು. ಅದರಿಂದ ಹವ್ಯಕರಿಂಗೆ ಅನುಕೂಲ ಆಯೆಕು. ಪ್ರದೇಶವಾರು, ಭಾಷಾವಾರು ಭೇದ ಇಲ್ಲದ್ದೆ, ಹವ್ಯಕ ಭಾಷಾ ಸಾಹಿತ್ಯವ ಬೆಳಶುವ ಆಶಯಲ್ಲಿ ಶುರು ಮಾಡ್ತಾ ಇಪ್ಪ “ಹವ್ಯಕ ವಿಶ್ವ”ಕ್ಕೆ ಪ್ರಪಂಚದಾದ್ಯಂತ ಇಪ್ಪ ಹವ್ಯಕರ ಬೆಸೆವ ಉದ್ದೇಶವೂ ಇದ್ದು.
ನಿಂಗಳೂ ಹವ್ಯಕವಿಶ್ವದ ಭಾಗ ಆಗಿ, ಲೇಖನಂಗಳ ಬರೆಯಿರಿ !!
ಲೇಖಕರು
ನಿಂಗಳ ಅಚ್ಚುಮೆಚ್ಚಿನ ಲೇಖಕರ ಹೊಸ ಬರಹಂಗೊ, ಪ್ರೇರಣೆ ನೀಡುವ ಕಥೆಗೊ, ಹೊಸ ಆಲೋಚನೆಗೊ ಎಲ್ಲವೂ ಒಂದೇ ಜಾಗೆಲಿ